Asianet Suvarna News Asianet Suvarna News

ವಾಸ್ತು ಸರಿಯಿಲ್ಲ ಎನ್ನುವ ರೇವಣ್ಣ ; ಮುಗಿಯದ ದೇವೇಗೌಡ್ರ ಮನೆ!

ರೇವಣ್ಣ ವಾಸ್ತುವನ್ನು ಅತಿಯಾಗಿ ನಂಬುತ್ತಾರೆ. ಹೋದಲ್ಲೆಲ್ಲಾ ವಾಸ್ತು ಸರಿಯಿರಬೇಕು ಎನ್ನುತ್ತಾರೆ. ಈಗ ದೇವೇಗೌಡರ ಮನೆಯ ವಾಸ್ತುವಿನ ಬಗ್ಗೆಯೂ ಕಂಪ್ಲೆಂಟ್ ಮಾಡ್ತಾ ಇದ್ದಾರೆ. ಹಾಗಾಗಿ ದೇವೇಗೌಡ್ರ ಮನೆಯೇ ಮುಗಿಯುತ್ತಿಲ್ಲ. 

Karnataka Minister Revanna complaints on vastu defects in Deve Gowda's house
Author
Bengaluru, First Published Oct 16, 2018, 11:19 AM IST

ಬೆಂಗಳೂರು (ಅ. 16): ದೇವೇಗೌಡರ ದಿಲ್ಲಿ ಮನೆಯ ನವೀಕರಣ ಶುರುವಾಗಿ 10 ತಿಂಗಳಾಯಿತು. ಇನ್ನೂ ಮುಗಿಯುತ್ತಲೇ ಇಲ್ಲ. ದಿಲ್ಲಿಗೆ ಬಂದಾಗಲೆಲ್ಲ ರೇವಣ್ಣ ವಾಸ್ತು ಪ್ರಕಾರ ಇದು ಸರಿ ಇಲ್ಲ ಅದು ಸರಿ ಇಲ್ಲ ಎಂದು ಒಡೆದು ಪುನಃ ಕಟ್ಟಿರಿ ಎಂದು ಹೇಳುತ್ತಾ ಹೇಳುತ್ತಾ ಕೆಲಸ ಮುಗಿಯುತ್ತಲೇ ಇಲ್ಲ.

ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ಹರದೀಪ್ ಪುರಿ ಅವರನ್ನು ಭೇಟಿ ಮಾಡಿದ್ದ ಗೌಡರು ಬೇಗ ಮನೆ ಮುಗಿಸಿಕೊಡಿ ಎಂದಾಗ ಸಚಿವರು ಕೂಡಲೇ ಅಧಿಕಾರಿಗಳನ್ನು ಕರೆದು ಕಾರಣ ಕೇಳಿದ್ದಾರೆ. ಅಯ್ಯೋ ಕಟ್ಟಿ ಕೆಡವಿ ಸಾಕಾಯ್ತು ಎಂದರಂತೆ ಎಂಜಿನಿಯರ್‌ಗಳು. ಹೀಗಾಗಿ ಗೌಡರು ಈಗ ದಿಲ್ಲಿಗೆ ಬಂದಾಗ ಕರ್ನಾಟಕ ಭವನದಲ್ಲಿ ತಂಗುತ್ತಾರೆ. ೪ನೇ ಮಹಡಿಯಲ್ಲಿ ಮಗನ ಸೂಟ್ ಪಕ್ಕ ಗೌಡರಿಗೆ ಒಂದು ಕೋಣೆ ಕೊಡಲಾಗಿದೆ. ವಾಸ್ತು ಪ್ರಕಾರ ಮನೆ ದೀಪಾವಳಿಗೆ ತಯಾರಾಗಬಹುದಂತೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

 

Follow Us:
Download App:
  • android
  • ios