ರಾಜ್ಯ ಬಿಜೆಪಿಗೆ ರಾಜೀನಾಮೆ ಭೀತಿ, ಫ್ಯಾನ್ಸ್ ಪ್ರವೇಶಕ್ಕೆ ಬಿಸಿಐ ಅನುಮತಿ; ಜ.25ರ ಟಾಪ್ 10 ಸುದ್ದಿ!
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರ ವಿವಾದ ಹುಟ್ಟಿಕೊಂಡಿದೆ. ಆದರೆ ವಿವಾದ ಸೃಷ್ಟಿಸಿದವರು ಟ್ವೀಟ್ ಡಿಲೀಟ್ ಮಾಡಿ ನಾಪತ್ತೆಯಾಗಿದ್ದಾರೆ. ಬಿಎಸ್ವೈ ಸಂಪುಟದ ಸಚಿವ ರಾಜೀನಾಮೆಗೆ ಸಜ್ಜಾಗಿದ್ದಾರೆ. ಫ್ಯಾನ್ಸ್ಗೆ ಕ್ರೀಡಾಂಗಣ ಪ್ರವೇಶಿಸಲು ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಇದೆ. ಬಿಗ್ಬಾಸ್ ಸ್ಪರ್ಧಿಯ ಡೆತ್ ನೋಟ್, ಮೊಬೈಲ್ನಲ್ಲಿ ವೋಟರ್ ಐಡಿ ಸೇರಿದಂತೆ ಜನವರಿ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ನೇತಾಜಿ ಭಾವಚಿತ್ರ ವಿವಾದ; ಅಸಲಿಯಲ್ಲ ಎಂದವರು ಟ್ವೀಟ್ ಡಿಲೀಟ್ ಮಾಡಿ ಸುಮ್ಮನಾದರು!...
ಸ್ವಾತಂತ್ರ್ಯ ವೀರ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳ ಮೂಲಕ ನೇತಾಜಿ ಜಯಂತಿಯನ್ನು ಸ್ಮರಣೀಯವಾಗಿಸಿದೆ. ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ರಾಷ್ಟ್ರಪತಿ ಭವನದಲ್ಲಿ ನೇತಾಜಿ ಭಾವಚಿತ್ರ ಅನಾವರಣ ಮಾಡಿದ್ದಾರೆ. ಆದರೆ ಇದು ಹೊಸ ವಿವಾದ ಹುಟ್ಟುಹಾಕಿದೆ. ಆದರೆ ಇದರ ಅಸಲಿಯತ್ತೇನು?
ರಾಜೀನಾಮೆಗೆ ಸಜ್ಜಾದ ಬಿಎಸ್ವೈ ಸಂಪುಟದ ಸಚಿವ : ಆರ್. ಅಶೋಕ್ ಸಂಧಾನ ಯತ್ನ...
ಬಿಎಸ್ವೈ ಸಂಪುಟದ ಸಚಿವರೋರ್ವರು ಅಸಮಾಧಾನದಿಂದ ರಾಜೀನಾಮೆಗೆ ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಸಚಿವ ಆರ್ ಅಶೋಕ್ ಸಂಧಾನದ ಯತ್ನ ನಡೆಸಿದ್ದಾರೆ.
ಇಂಡೋ-ಆಂಗ್ಲೋ ಟಿ20 ಸಮರ: ಕ್ರಿಕೆಟ್ ಫ್ಯಾನ್ಸ್ಗೆ ಗುಡ್ ನ್ಯೂಸ್..!...
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಮೈದಾನಕ್ಕೆ ಪ್ರವೇಶಿಸಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಚಿಂತನೆಯನ್ನು ಬಿಸಿಸಿಐ ಮಾಡುತ್ತಿದೆ.
ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಇನ್ನಿಲ್ಲ!...
ಖಿನ್ನತೆಯಿಂಬ ಬಳಲುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋಸ್ ಕೊಡೋ ಭರದಲ್ಲಿ ಕಳಚಿ ಬಿತ್ತು ದುಬಾರಿ ಆಭರಣ: ಹೀಗಿತ್ತು ಊರ್ವಶಿ ರಿಯಾಕ್ಷನ್...
ಆಭರಣ ಕಳಚಿ ಬಿದ್ರೆ ಹೆಣ್ಮಕ್ಕಳ ರಿಯಾಕ್ಷನ್ ಹೇಗಿರುತ್ತೆ ಗೊತ್ತಾ..? ನಟಿ ಊರ್ವಶಿ ರೌಟೇಲಾ ಪರ್ಫಕ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ ನೋಡಿ
ವೋಟರ್ ಐಡಿ ಇನ್ನು ಮೊಬೈಲ್ನಲ್ಲೇ ಲಭ್ಯ, ಹೀಗೆ ಡೌನ್ಲೋಡ್ ಮಾಡ್ಕೊಳ್ಳಿ!...
ಮತದಾರರ ಫೋಟೋ ಗುರುತಿನ ಚೀಟಿ (ಎಪಿಕ್)ಯ ಡಿಜಿಟಲ್ ಆವೃತ್ತಿಯನ್ನು ಕೇಂದ್ರ ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನವಾದ ಸೋಮವಾರ ಲೋಕಾರ್ಪಣೆಗೊಳಿಸಲಿದೆ.
ಅಮೆಜಾನ್, ಫ್ಲಿಪ್ಕಾರ್ಟ್, ಸ್ವಿಗ್ಗಿ ‘ಹಗಲು ದರೋಡೆ’: ಸಿಎಐಟಿ ಆರೋಪ...
ಕೇಂದ್ರ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿ ‘ಹಗಲು ದರೋಡೆ’ ನಡೆಸುತ್ತಿರುವ ಆನ್ಲೈನ್ ಇ ಕಾಮರ್ಸ್ ತಾಣಗಳಾದ ಅಮೆಜಾನ್, ಫ್ಲಿಪ್ಕಾರ್ಟ್, ಝೊಮ್ಯಾಟೋ, ಸ್ವಿಗ್ಗಿಯಂಥ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಒತ್ತಾಯಿಸಿದೆ.
ಗಣರಾಜ್ಯೋತ್ಸವ ಪರೇಡ್ ಕಾರಣ ಸಂಚಾರ ಮಾರ್ಗದಲ್ಲಿ ಬದಲಾವಣೆ!...
ಗಣರಾಜ್ಯೋತ್ಸವ ಪರೇಡ್ ಕಾರಣ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದೆ. ಇದೀಗ ಗಣಣರಾಜ್ಯೋತ್ಸವ ದಿನ ಎಲ್ಲೆಲ್ಲಿ ಟ್ರಾಫಿಕ್ ಡೈವರ್ಶನ್ ಮಾಡಲಾಗಿದೆ. ಇಲ್ಲಿದೆ ಮಾಹಿತಿ
ಕರ್ನಾಟಕದ 19 ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಗೌರವ...
ಕರ್ನಾಟಕದ ಅಧಿಕಾರಿಗಳಿಗೆ ಪೊಲೀಸ್ ಮೆಡಲ್/ ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿಗಳಿಂದ ಪ್ರದಾನ/ ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ಗೌರವ
ಶಾಲೆ ಆರಂಭಿಸುವ ಸೂಚನೆ ನೀಡಿದ ಸಚಿವ ಸುರೇಶ್ ಕುಮಾರ್...
ರಾಜ್ಯದಲ್ಲಿ ಈಗಾಗಲೇ 7ನೇ ತರಗತಿಯಿಂದ ಶಾಲೆಗಳು ತೆರೆದಿದ್ದು ಇನ್ಮುಂದೆ ಎಲ್ಲಾ ತರಗತಿಗಳಿಗೂ ಪೂರ್ಣ ಪ್ರಮಾನದ ತರಗತಿಗಳು ಶೀಘ್ರವೇ ಆರಂಭ ಆಗುವ ಬಗ್ಗೆ ಸಚಿವರು ಸೂಚನೆ ನೀಡಿದ್ದಾರೆ.