ಬಂದ್ಗಾಗಿ ಸಂಘಟನೆಯೊಳಗೆ ಸಿಡಿಮಿಡಿ, ಸಿಹಿ ಸುದ್ದಿ ನೀಡಿದ ಎಬಿಡಿ: ನ.20ರ ಟಾಪ್ 10 ಸುದ್ದಿ!
ಡಿಸೆಂಬರ್ 5 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಇದೀಗ ಕರವೇ ಸಂಘಟೆಯಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ಕೆನಾಡ ಸೇರಿದ್ದ 18ನೇ ಶತಮಾನ ಅನ್ನಪೂರ್ಣೆ ವಿಗ್ರಹ ಇದೀಗ ಮರಳಿ ಭಾರತಕ್ಕೆ ಬಂದಿದೆ. ಟೂರ್ನಿ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಎಬಿಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಿಚ್ಚ ಸುದೀಪ್ ಮೆಚ್ಚಿದ ಆ್ಯಕ್ಟ್ 1978 ಚಿತ್ರ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸೇರಿದಂತೆ ನವೆಂಬರ್ 20 ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೆನಡ ಸೇರಿದ್ದ 18ನೇ ಶತಮಾನದ ಅನ್ನಪೂರ್ಣ ವಿಗ್ರಹ ಭಾರತಕ್ಕೆ ಹಸ್ತಾಂತರ!...
ಘಜ್ನಿ ದಾಳಿ, ಮೊಘಲರ ದಾಳಿ, ಬ್ರಟೀಷ್ ಆಕ್ರಮಣ ಸೇರಿದಂತೆ ಹಲವು ದಾಳಿಗಳನ್ನು ಭಾರತ ಕಂಡಿದೆ. ಇದು ಕೇವಲ ದಾಳಿಗಳಾಗಿ ಮಾತ್ರ ಉಳಿದಿಲ್ಲ. ಕಾರಣ ಇಲ್ಲಿನ ಅಪಾರ ಸಂಪತ್ತು ಕೂಡ ದೋಚಲಾಗಿದೆ. ಹೀಗೆ ಭಾರತದಿಂದ ಕಾಣೆಯಾಗಿ ಕೊನೆಗೆ ಕೆನಾಡ ಸೇರಿದ್ದ 18ನೇ ಶತಮಾನ ಅನ್ನಪೂರ್ಣೆ ವಿಗ್ರಹ ಇದೀಗ ಮರಳಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.
ತನ್ನ ಮೇಲೆಯೇ ಕೊರೋನಾ ಔಷಧ ಪ್ರಯೋಗ ಮಾಡಿಕೊಂಡ ಆರೋಗ್ಯ ಸಚಿವ..!...
ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾದ ಕೊವಾಕ್ಸೀನ್ ಪ್ರಯೋಗಕ್ಕೆ ತಮ್ಮನ್ನೇ ಒಡ್ಡಿದ್ದಾರೆ ಈ ಆರೋಗ್ಯ ಸಚಿವ..!
ಜುಲೈ ವೇಳೆ ಭಾರತಕ್ಕೆ 50 ಕೋಟಿ ಕೊರೋನಾ ಲಸಿಕೆ ಲಭ್ಯ...
‘ಮುಂದಿನ 3-4 ತಿಂಗಳಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ. ಜುಲೈ- ಅಗಸ್ಟ್ ವೇಳೆಗೆ 25ರಿಂದ 30 ಕೋಟಿ ಭಾರತೀಯರಿಗೆ 40 ರಿಂದ 50 ಕೋಟಿ ಡೋಸ್ನಷ್ಟುಕೊರೋನಾ ಲಸಿಕೆ ಲಭ್ಯವಾಗಲಿದೆ.
ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಆರ್ಸಿಬಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್..!...
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಆರ್ಸಿಬಿ ಸ್ಟಾರ್ ಆಟಗಾರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಸ್ಯಾಂಡಲ್ವುಡ್ ಬಾದ್ಶಾ ಮೆಚ್ಚಿದ ‘ಆಕ್ಟ್ 1978’ ಚಿತ್ರ...
ಕೊರೋನಾ ವೈರಸ್ ಲಾಕ್ಡೌನ್ ನಂತರ ಇದೇ ಮೊದಲು ಆ್ಯಕ್ಟ್ 1978 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 'ನಾತಿ ಚರಾಮಿ'ಯಂಥ ವಿಭಿನ್ನ ಕಥಾವಸ್ತುವುಳ್ಳು ಮಂಸೋರೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಿಚ್ಚು ಸುದೀಪ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಟಿ ಅಭಿವೃದ್ಧಿಗಾಗಿ ವಿದೇಶಗಳ ಜತೆ ಕರ್ನಾಟಕ ನೇರ ಒಪ್ಪಂದ...
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಿರಂತರ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ನೇರಾನೇರ ವ್ಯವಹಾರಿಕ ಸಂಬಂಧ, ವಿನಿಮಯ ಒಪ್ಪಂದಗಳನ್ನು ನಡೆಸಿಕೊಂಡು ಬರುತ್ತಿದೆ. ದೇಶದಲ್ಲೇ ಇಂತಹ ಸಾಧನೆ ಮೆರೆದ ಏಕೈಕ ರಾಜ್ಯ ಕರ್ನಾಟಕವಾಗಿದೆ.
ತೈಲ ಮತ್ತು ಅನಿಲ ತಾಣ ಪತ್ತೆ; ಭಾರತಕ್ಕೆ ಹೊಸ ಬೆಳಕಾದ ಕೋಲ್ಕತಾ!...
ಭಾರತ ಇದೀಗ ಮತ್ತೊಂದು ತೈಲ ತಾಣವನ್ನು ಪತ್ತೆ ಹೆಚ್ಚಿದೆ. ಇದೀಗ ವಿಶ್ವದ ತೈಲ ನಕ್ಷೆಯಲ್ಲಿ ಭಾರತದ ಹೊಸ ತೈಲ ತಾಣ ಸ್ಥಾನ ಪಡೆಯಲಿದೆ.
2 ತಿಂಗಳ ಬಳಿಕ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!...
ಕಳೆದೆರಡು ತಿಂಗಳಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಳಿತ ಕಾಣದೆ ಜನರ ಆತಂಕಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿತ್ತು. ಆದರೆ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ.
ಬಂದ್ ಬಗ್ಗೆ ನಮ್ಮ ಸಂಘಟನೆಯಲ್ಲೇ ಭಿನ್ನಾಭಿಪ್ರಾಯ ಇದೆ: ಪ್ರವೀಣ್ ಶೆಟ್ಟಿ...
ಡಿ. 05 ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಆದರೆ ಬಂದ್ ನಡೆಸಬೇಕೋ, ಬೇಡವೋ ಎಂಬುದರ ಬಗ್ಗೆ ನಮ್ಮ ಸಂಘಟನೆಯಲ್ಲಿಯೇ ಭಿನ್ನಾಭಿಪ್ರಾಯ ಇದೆ : ಪ್ರವೀಣ್ ಶೆಟ್ಟಿ
ಕದ್ದು ಕಬ್ಬು ತಿನ್ನೋವಾಗ ಸಿಕ್ಕಿಬಿತ್ತು ಪುಟ್ಟ ಆನೆ..! ಆಮೇಲೇನಾಯ್ತು ನೋಡಿ...
ಪ್ರಾಣಿ ಪಕ್ಷಿಗಳು ಕೆಲವೊಮ್ಮೆ ಜನರ ಮಧ್ಯೆ ಸಿಕ್ಕಿ ಮುದ್ದು ಮುದ್ದಾಗಿ ವರ್ತಿಸುತ್ತವೆ. ಅವುಗಳ ವಿಡಿಯೋ, ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಕಬ್ಬು ಕದ್ದು ತಿನ್ನೋಕೆ ಬಂದ ಆನೆಮರಿಯೊಂದು ಏನು ಮಾಡಿದೆ ನೋಡಿ.