ಮೈಸೂರು, ಮಧ್ಯ ಕರ್ನಾಟಕ ಬಿಜೆಪಿ ಶಾಸಕರೇ ಜೆಡಿಎಸ್ ಟಾರ್ಗೆಟ್!
ಬಿಜೆಪಿ ಏಟಿಗೆ ಎದುರೇಟು ನೀಡಲು ಜೆಡಿಎಸ್ ಸಜ್ಜು! ಬಿಜೆಪಿ ಶಾಸಕರ ಸಂಪರ್ಕದಲ್ಲಿದ್ದಾರೆ ಜೆಡಿಎಸ್ ನಾಯಕರು! ಮೈಸೂರು, ಮಧ್ಯ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಮೇಲೆ ಕಣ್ಣು
ಬೆಂಗಳೂರು(ಸೆ13): ಸರ್ಕಾರ ಉರುಳಿಸಲು ಬಿಜೆಪಿ ಆಪರೇಶನ್ ಕಮಲ ನಡೆಸಲಿದೆ ಎಂಬ ಗುಮಾನಿ ಬೆನ್ನಲ್ಲೇ, ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಕೂಡ ಯೋಜನೆ ರೂಪಿಸಿದೆ. ಮೈಸೂರು, ಮಧ್ಯ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಆಪರೇಷನ್ ಕಮಲದ ಏಟಿಗೆ ಎದಿರೇಟು ನೀಡಲು ಜೆಡಿಎಸ್ ಪಾಳೆಯ ಸಜ್ಜಾಗಿದೆ.
ಸಿಎಂ ಕುಮಾರಸ್ವಾಮಿ ಸೂಚನೆಯಂತೆ ಐವರು ಬಿಜೆಪಿ ಶಾಸಕರು ಜೆಡಿಎಸ್ ಸಂಪರ್ಕದಲ್ಲಿದ್ದು, ಬಿಜೆಪಿ ಶಾಸಕರನ್ನು ಕರೆತರುವ ಜವಾಬ್ದಾರಿ ಸಚಿವ ಸಿಎಸ್ ಪುಟ್ಟರಾಜು ಅವರಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಶಾಸಕರು ಕೈ ಕೊಟ್ಟರೆ ತಕ್ಷಣವೇ ಐವರು ಬಿಜೆಪಿ ಶಾಸಕರಿಂದ ರಾಜೀನಾಮೆ ಪಡೆದು ಸರ್ಕಾರ ಉಳಿಸಿಕೊಳ್ಳುವ ಇರಾದೆ ಜೆಡಿಎಸ್ ನಾಯಕರದ್ದು.
ಈ ಕುರಿತು ಹೆಚ್ಚಿನ ಮಾಹಿತಿಗಾಘಿ ಈ ವಿಡಿಯೋ ನೋಡಿ..