Asianet Suvarna News Asianet Suvarna News

ಸಿದ್ದರಾಮಯ್ಯ ಜೊತೆ ಮಾತನಾಡಲು ಓಡಿ ಬಂದ ದೇವೇಗೌಡ್ರು:ರಹಸ್ಯ ಸಭೆ

ಕುಮಾರ ಕೃಪಾ ಗೆಸ್ಟ್ ಹೌಸ್ ನಲ್ಲಿ ದೇವೆಗೌಡರು ಮತ್ತು ಸಿದ್ದರಾಮಯ್ಯ ದಿಢೀರ್ ಭೇಟಿ ಅಂತ್ಯ. ಸಿದ್ದರಾಮಯ್ಯ ಜೊತೆಗಿನ ದೇವೇಗೌಡರ ಮಾತುಕತೆ ‌ಏನೇನಾಯ್ತು? ಇಲ್ಲಿದೆ ವಿವರ

JDS supremo HD Devegowda Meets Former CM Siddaramaiah in Kumarakrupa
Author
Bengaluru, First Published Nov 19, 2018, 7:30 PM IST

ಬೆಂಗಳೂರು, [ನ.19]: ಒಂದು ಕಡೆ ರಾಜ್ಯದಲ್ಲಿ ರೈತರ ಆಕ್ರೋಶ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿಯೇ ಮಾಜಿ ಪ್ರಧಾನಿ ದೇವೇಗೌಡ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮೊರೆ ಹೋಗಿದ್ದು, ಉಭಯ ನಾಯಕ ದಿಢೀರ್ ಬೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ

ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿ ಮಾತಾಡಬೇಕು ಎಂದು ಹೇಳಿದ್ದ ದೇವೇಗೌಡರು ನೇರವಾಗಿ ಇಂದು [ಸೋಮವಾರ] ಸಂಜೆ ಕುಮಾರಕೃಪಾಕ್ಕೆ ದೌಡಾಯಿಸಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಸಭೆ ನಡೆಸಿದರು. 

ಸಭೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಹಾಗೂ ಮೈತ್ರಿ ಸರ್ಕಾರದ ಆಡಳಿತದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಮೈತ್ರಿ ಸರ್ಕಾರಕ್ಕೆ ಕಗ್ಗಂಟಾಗಿರುವ ನಿಗಮ ಮಂಡಳಿ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದು, ಬೆಳಗಾವಿ ಅಧಿವೇಶನ ಮುಗಿದ ಮೇಲೆ ಸಂಪುಟ ವಿಸ್ತರಣೆಗೆ ಬಗ್ಗೆ ನೋಡೊಣ ಎಂದು ಸಿದ್ದರಾಮಯ್ಯಗೆ ದೇವೇಗೌಡರು ತಿಳಿಸಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವವರಿಗೆ ದೊಡ್ಡಗೌಡ್ರು ಸಮಾಧಾನಪಡಿಸಿದ್ದಾರೆ. ಯಾಕಂದ್ರೆ ರೈತ ಮಹಿಳೆಗೆ ನಾಲ್ಕು ವರ್ಷದಿಂದ ಏಲ್ಲಿ ಮಲಗಿದ್ದೆ ಎಂಬ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದರು. ನಾಲ್ಕು ವರ್ಷದ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೇಲೆ ಸಿಎಂ ಗೂಬೆ ಕೂರಿಸಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟಿಗೆದ್ದಿದ್ದರು. 
 

Follow Us:
Download App:
  • android
  • ios