Asianet Suvarna News Asianet Suvarna News

ಜನಾರ್ದನ ರೆಡ್ಡಿಗೆ ಇಂದು ಸಿಗುತ್ತಾ ಬೇಲ್?

ಕಳೆದ ಎರಡು ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ಸೇರಿದ್ದಾರೆ ಜನಾರ್ದನ ರೆಡ್ಡಿ | ಇಂದು ಜಾಮೀನು ಸಿಗುವ ನಿರೀಕ್ಷೆ 

Janardhana reddy expected  to be get bail on November 13
Author
Bengaluru, First Published Nov 13, 2018, 11:49 AM IST

ಬೆಂಗಳೂರು (ನ. 13):  ಆ್ಯಂಬಿಡೆಂಟ್ ವಂಚನೆ ಪ್ರಕರಣದ ಡೀಲ್ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಗಾಲಿ ಜನಾರ್ದನರೆಡ್ಡಿಗೆ ಇಂದು ಜಾಮೀನು ಸಿಗುವ ಸಾಧ್ಯತೆ ಇದೆ.  

ಅಷ್ಟಕ್ಕೂ ಜನಾರ್ದನ ರೆಡ್ಡಿ ವಿರುದ್ಧ ಸಿಸಿಬಿ ದಾಖಲಿಸಿರುವ ಕೇಸ್​ಗಳಾವುವು?

ಇಂದು ಮುಂಜಾನೆಯಿಂದ ಜನಾರ್ದನ ರೆಡ್ಡಿ ಜಾಮೀನು ಸಿಗುವ ಖುಷಿಯಲ್ಲಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. 

ಜೈಲಿನಲ್ಲಿ ಕಳೆದ ಎರಡು ರಾತ್ರಿಗಳನ್ನು ಕಳೆದಿದ್ದಾರೆ ಜನಾರ್ದನ ರೆಡ್ಡಿ. ರೆಡ್ಡಿ ಜೈಲಿಗೆ ಸೇರಿದಾಗಿನಿಂದಲೂ ಅಲಿಖಾನ್ ಅಂಡ್ ಟೀಂ ಜೈಲಿನ ಬಳಿಯೇ ಬಿಡು ಬಿಟ್ಟಿದೆ. ಅವರ ಬೇಕು ಬೇಡಗಳನ್ನು ಪೂರೈಸುತ್ತಿದೆ. 

ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರು..?

ಜೈಲಿನ ಸುತ್ತಮುತ್ತಲಿನ ಕಡೆ ಹಗಲು ರಾತ್ರಿ ಎನ್ನದೇ ರೆಡ್ಡಿ ಆಪ್ತರು ಬೀಡು ಬಿಟ್ಟಿದ್ದಾರೆ.  ಇಂದು ಕೋರ್ಟ್ ನಲ್ಲಿ ಬೇಲ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

Follow Us:
Download App:
  • android
  • ios