ಪ್ರಯಾಣಿಕರೇ ಇಲ್ಲೊಮ್ಮೆ ಗಮನಿಸಿ : ರೈಲ್ವೆ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಭಾರತೀಯ ರೈಲ್ವೆ ಇಲಾಖೆ ಇದೀಗ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಉತ್ತರ ವಲಯದ 301 ರೈಲುಗಳ ಆಗಮನ ನಿರ್ಗಮನ ಸಮಯವನ್ನು ಬದಲಾವಣೆ ಮಾಡಲಾಗಿದೆ.
ನವದೆಹಲಿ : ಭಾರತೀಯ ರೈಲ್ವೆ ಇಲಾಖೆಯು ರೈಲುಗಳ ಆಗಮನ ನಿರ್ಗಮನ ಸಮಯವನ್ನು ಸಮಯವನ್ನು ಬದಲಾವಣೆ ಮಾಡುತ್ತಿದೆ. ಈ ಬದಲಾವಣೆಯು ಆಗಸ್ಟ್ 15ರಿಂದ ಆಗಲಿದೆ. ಉತ್ತರ ವಲಯ ರೈಲ್ವೆಯು ಒಟ್ಟು 301 ರೈಲುಗಳ ಸಮಯ ಬದಲಾವಣೆ ಮಾಡುವುದಾಗಿ ಹೇಳಿದೆ.
159 ರೈಲುಗಳು ಆಗಮಿಸುವ ಸಮಯವನ್ನು ಮುಂಚಿತವಾಗಿ ನೀಡಲಾಗಿದೆ. 58 ರೈಲುಗಳ ಸಮಯವನ್ನು ಮುಂದೂಡಲಾಗಿದೆ. 142 ರೈಲುಗಳ ಸಮಯವನ್ನು ಮುಂದೂಡಿಕೆ ಮಾಡಲಾಗಿದೆ.
ಈ ಬಗ್ಗೆ ಉತ್ತರ ವಲಯ ರೈಲ್ವೆ ಇಲಾಖೆ ರೈಲುಗಳ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಅಮೃತಸರ ಎಕ್ಸ್ ಪ್ರೆಸ್ , ಶತಾಬ್ದಿ ಎಕ್ಸ್ ಪ್ರೆಸ್, ತೇಜಸ್ ಎಕ್ಸ್ ಪ್ರೆಸ್, ಹಮ್ ಸಫರ್ ಎಕ್ಸ್ ಪ್ರೆಸ್ ರೈಲುಗಳು 5 ನಿಮಿಷ ಬೇಗ ಆಗಮಿಸಲಿವೆ.
ನೀಲಾಚಲ್, ಡೆಹ್ರಾಡೂನ್ - ಅಮೃತಸರ್ ಎಕ್ಸ್ ಪ್ರೆಸ್, ಹಮ್ ಸಫರ್ ಎಕ್ಸ್ ಪ್ರೆಸ್, ಜನ್ ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳು ಸಮಯವನ್ನು ಮುಂದಕ್ಕೆ ಹಾಕಲಾಗಿದೆ.
ರೈಲುಗಳ ಆಗಮನ ಹಾಗೂ ನಿರ್ಗಮನದ ಸಮಯವನ್ನು 5 ರಿಂದ 2 ಗಂಟೆಗಳಷ್ಟು ಬದಲಾವಣೆ ಮಾಡಲಾಗಿದೆ.