Asianet Suvarna News Asianet Suvarna News

ಉರಗ ರಕ್ಷಕ ಹಾವು ಕಡಿತಕ್ಕೆ ಬಲಿ: ಜನರಿಂದ ಹಾವಿನ ಹತ್ಯೆ

ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ವೇಳೆ ಅದೇ ಹಾವು ಕಚ್ಚಿದ್ದರಿಂದ ಉರಗ ತಜ್ಞನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ. 

Herpetologist Death After Snake Bite In Nanjangud
Author
Bengaluru, First Published Dec 24, 2018, 11:26 AM IST

ನಂಜನಗೂಡು: ಮನೆಯೊಂದರಲ್ಲಿ ಕಾಣಿಸಿಕೊಂಡ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ವೇಳೆ ಅದೇ ಹಾವು ಕಚ್ಚಿದ್ದರಿಂದ ಉರಗ ತಜ್ಞನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಆಕ್ರೋ​ಶ​ಗೊಂಡ ಗ್ರಾಮ​ಸ್ಥರು ಹಾವನ್ನು ಕಟ್ಟಿ​ಗೆ​ಯಿಂದ ಬಡಿದು, ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾರೆ. 

ತಾಲೂ​ಕಿನ ನೇರಳೆ ಗ್ರಾಮದ ನಿವಾಸಿ ಕೃಷ್ಣ (38) ಮೃತ ಉರಗ ತಜ್ಞ. ಕೃಷ್ಣ ಕೆಲ ವರ್ಷಗಳಿಂದ ಸುತ್ತಮುತ್ತಲ ಗ್ರಾಮದಲ್ಲಿ ಹಾವುಗಳು ಕಾಣಿಸಿಕೊಂಡಾಗ ಅವುಗಳನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಹಾವುಗಳ ಸಂರಕ್ಷಣೆ ಮಾಡುತ್ತಿದ್ದರು. ಶನಿವಾರ ಗ್ರಾಮದ ನೇರಳೆ ಗ್ರಾಮದ ರಾಮಶೆಟ್ಟಿಅ​ವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. 

ಅದನ್ನು ಹಿಡಿದು ಹೊರವಲಯದ ಕಾಡಿನಲ್ಲಿ ಬಿಡುವ ವೇಳೆ ಅದೇ ಹಾವು ಕೃಷ್ಣ ಅವರನ್ನು ಕಚ್ಚಿದೆ. ಕೂಡಲೇ ಆವರನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. 

ನಂತರ ಕೃಷ್ಣ ಅವ​ರ ಶವವನ್ನು ಗ್ರಾಮಕ್ಕೆ ತಂದು ಮನೆಯಲ್ಲಿ ಇರಿಸಲಾಗಿತ್ತು. ಕೃಷ್ಣನನ್ನು ಬಲಿ ಪಡೆದ ಹಾವು ಮತ್ತೆ ಗ್ರಾಮದಲ್ಲಿ ಮತ್ತೆ ಕಾಣಿ​ಸಿ​ಕೊಂಡಿದೆ. ಕೂಡಲೇ ಹಾವನ್ನು ಕಂಡ ಗ್ರಾಮಸ್ಥರು ಆಕ್ರೋಶಗೊಂಡು ಕಟ್ಟಿಗೆ ಮತ್ತು ಕಲ್ಲು​ನಿಂದ ಜಜ್ಜಿ ಸಾಯಿ​ಸಿ​ದ್ದಾರೆ.

Follow Us:
Download App:
  • android
  • ios