ಇದೇನು ಮಳೆಗಾಲವೋ, ಕೊನೆಗಾಲವೋ?
ಪ್ರವಾಹದಿಂದ ತತ್ತರಿಸಿದೆ ಉತ್ತರ ಭಾರತ
ಕುಂಭದ್ರೋಣ ಮಳೆಗೆ ದಕ್ಷಿಣ ಭಾರತ ದಿಗ್ಭ್ರಾಂತ
ಗ್ರೀಸ್, ಇಂಡೋನೇಷ್ಯಾದಲ್ಲೂ ಭಿಕರ ಜಲಪ್ರಳಯ
ಜಲಪ್ರಳಯಕ್ಕೆ ನೂರಾರು ಜೀವಗಳು ಬಲಿ
ಬೆಂಗಳೂರು(ಆ.೧): ದಿನದಿಂದ ದಿನಕ್ಕೆ ಜೋರಾಗ್ತಿದೆ ವರುಣನ ಆರ್ಭಟ. ಅದರಲ್ಲೂ ಪ್ರವಾಹದಿಂದ ಉತ್ತರ ಭಾರತ ತತ್ತರಿಸಿ ಹೋಗಿದೆ. ಕೇವಲ ೭೨ ಗಂಟೆಗಳಲ್ಲಿ ಯಮುನಾ ನದಿಯಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ೫೨ ಸಾವಿರ ಕೋಟಿ ಲೀಟರ್ ನೀರು ಪ್ರವಾಹದ ರೂಪದಲ್ಲಿ ಹರಿದು ಬಂದಿದೆ.
ಸತತ ಎರಡು ತಿಂಗಳಿನಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜಗತ್ತು ನಲುಗಿ ಹೋಗಿದೆ. ಅದರಲ್ಲೂ ಉತ್ತರ ಭಾರತ ಬೆಚ್ಚಿ ಬಿದ್ದಿದೆ. ದಕ್ಷಿಣ ಭಾರತ ದಿಗ್ಭ್ರಾಂತವಾಗಿದೆ. ಜಲಪ್ರವಾಹಕ್ಕೆ ಜನರ ಬದುಕು ಕೊಚ್ಚಿಕೊಂಡು ಹೋಗಿದೆ. ವಿಶ್ವ ವಿಖರ್ಖಯಾತ ಪ್ರೇಮಸೌಧ ತಾಜಮಹಲ್ ಗೂ ಕೂಡ ನೀರು ನುಗ್ಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..