Asianet Suvarna News Asianet Suvarna News

ಈರುಳ್ಳಿ ಜೊತೆ ಸಿಲಿಂಡರ್ ಬೆಲೆ ಹೆಚ್ಚಳ, ಸ್ಟಾರ್ ನಟನ ಜೊತೆ ರಶ್ಮಿಕಾ ನಟಿಸಲ್ಲ; ಡಿ.3ರ ಟಾಪ್ 10 ಸುದ್ದಿ!

ಒಂದೆಡೆ ರಾಜ್ಯದ ಉಪಚುನಾವಣೆ ಕಾವು ಏರುತ್ತಿದೆ. ಇತ್ತ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ, ಇತ್ತ ಸಿಲಿಂಡರ್ ಬೆಲೆ ಹೆಚ್ಚಳದ ಶಾಕ್ ಜನರಿಗೆ ಮತ್ತಷ್ಟು ತಲೆನೋವು ತಂದಿದೆ. ಬಾಬರಿ ಮಸೀದಿ ಪರ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣ ವಕಾಲತ್ತಿನಿಂದ ವಜಾಗೊಳಿಸಲಾಗಿದೆ. ಟಾಲಿವುಡ್ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ನಟನ ಜೊತೆ ನಟಿಸಲು ನಿರಾಕರಿಸಿದ್ದಾರೆ. ಕಿಚ್ಚ ಸುದೀಪ್ ಜಾವಾ ಬೈಕ್ ರೈಡ್, ಮೋದಿ ಅಭಿಮಾನಿಯ ವಿಶೇಷ ಬೇಡಿಕೆ ಸೇರಿದಂತೆ ಡಿಸೆಂಬರ್ 3ರ ಟಾಪ್ 10 ಸುದ್ದಿ ಇಲ್ಲಿವೆ.

Gas cylinder price to Rashmika mandanna top 10 news of December 3
Author
Bengaluru, First Published Dec 3, 2019, 5:07 PM IST

1) ಮೋದಿಯಿಂದ ಮಗಳಿಗೆ ಸಚಿವ ಸ್ಥಾನದ ಆಮೀಷ: ಒಲ್ಲೆ ಎನ್ನಲು ಪವಾರ್ ತೆಗೆದುಕೊಂಡಿದ್ದು ಒಂದೇ ನಿಮಿಷ

Gas cylinder price to Rashmika mandanna top 10 news of December 3

ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದರೆ, ಕೇಂದ್ರದಲ್ಲಿ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಧಾನಿ ಮೋದಿ ಆಮಿಷವೊಡ್ಡಿದ್ದರು ಎಂದು ಖುದ್ದು ಶರದ್ ಪವಾರ್ ಹೇಳಿದ್ದಾರೆ.

2) ಕಸ್ಟಮರ್‌ ಕೇರ್‌ಗೆ 24 ಸಾವಿರ ಕರೆ ಮಾಡಿದ ವೃದ್ಧ: ಮುಂದೇನಾಯ್ತು ನೀವೇ ನೋಡಿ

Gas cylinder price to Rashmika mandanna top 10 news of December 3

ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿದ್ರೆ ದರ ಕಡಿತಗೊಳ್ಳುವುದಿಲ್ಲ. ದೂರು ಹಾಗೂ ಸಲಹೆ ನೀಡಲು ಕಂಪನಿಗಳು ಸಾಮಾನ್ಯವಾಗಿ ಗ್ರಾಹಕರಿಗೆ ಟೋಲ್ ಫ್ರೀ ನಂಬರ್ ಸೌಲಭ್ಯ ನೀಡುತ್ತದೆ. ಆದರೀಗ ಈ ಸೌಲಭ್ಯ ಟೆಲಿಕಾಂ ಕಂಪನಿಯೊಂದಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. 71 ವರ್ಷದ ವೃದ್ಧನೊಬ್ಬ ದೂರು ನೀಡಲು ಈ ಟೆಲಿಕಾಂ ಕಂಪನಿಗೆ 24 ಸಾವಿರ ಬಾರಿ ಕರೆ ಮಾಡಿದ್ದಾರೆ.

3) ರಾಜೀವ್ ಧವನ್ ವಜಾಗೊಳಿಸಿದ ಜಮೈತ್: ನಾನ್ಸೆನ್ಸ್ ಎಂದ ವಕೀಲ!

Gas cylinder price to Rashmika mandanna top 10 news of December 3

ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಬರಿ ಮಸೀದಿ ಪರ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣ ವಕಾಲತ್ತಿನಿಂದ ವಜಾಗೊಳಿಸಲಾಗಿದೆ. ಪ್ರಕರಣದ ವಕಾಲತ್ತಿನಿಂದ ರಾಜೀವ್ ಧವನ್ ಅವರನ್ನು ವಜಾಗೊಳಿಸಿ ಜಮೈತ್ ಉಮೆಲಾ-ಇ-ಹಿಂದ್ ಆದೇಶ ನೀಡಿದೆ.

4) ರಾಜನಾಥ್ ಕಾರು ತಡೆದ ಮೋದಿ ಅಭಿಮಾನಿ ಮಾಡಿದ್ದೇನು ನೋಡಿ!

Gas cylinder price to Rashmika mandanna top 10 news of December 3

ಪ್ರಧಾನಿ ಮೋದಿ ಭೇಟಿ ಮಾಡಿಸುವಂತೆ ಒತ್ತಾಯಿಸಿ ವ್ಯಕ್ತಿಯೋರ್ವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರು ಅಡ್ಡಗಟ್ಟಿದ ಘಟನೆ ನಡೆದಿದೆ. ತಾನು ಮೋದಿ ಅವರ ಅಭಿಮಾನಿಯಾಗಿದ್ದು ಅವರನ್ನು ಭೇಟಿ ಮಾಡಿಸುವಂತೆ ವ್ಯಕ್ತಿ ರಾಜನಾಥ್ ಸಿಂಗ್‌ಗೆ ದಂಬಾಲು ಬಿದ್ದಿದ್ದಾನೆ.

5) ಹೊಸ ಬದುಕಿಗೆ ಕಾಲಿಟ್ಟ ಮನೀಶ್ ಪಾಂಡೆಗೆ ಶುಭಕೋರಿದ ವಿರಾಟ್ ಕೊಹ್ಲಿ!

Gas cylinder price to Rashmika mandanna top 10 news of December 3

ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಬಹುಕಾಲದ ಗೆಳತಿ, ನಟಿ ಆಶ್ರಿತಾ ಶೆಟ್ಟಿ ಮದುವೆಯಾಗಿದ್ದಾರೆ. ಡಿಸೆಂಬರ್ 2 ರಂದು ಮುಂಬೈನಲ್ಲಿ ವಿವಾಹವಾದ ಮನೀಶ್ ಪಾಂಡೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ. 

6) ಸ್ಟಾರ್ ನಟನ ಜೊತೆ ಆ್ಯಕ್ಟ್ ಮಾಡಲು No ಎಂದ ರಶ್ಮಿಕಾ; ವಿಜಯ್ ಬಿಟ್ಟು ಬರೋದೇ ಇಲ್ವಾ?.

Gas cylinder price to Rashmika mandanna top 10 news of December 3

ಕೊಡಗಿನ ಚೆಲುವೆ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟಿ.  ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದು ಸ್ಯಾಂಡಲ್‌ವುಡ್ ಆದರೂ ಬ್ಯುಸಿ ಆಗಿರುವುದು ಮಾತ್ರ ಟಾಲಿವುಡ್‌ನಲ್ಲಿ. ಆದರೆ ಸ್ಟಾರ್ ನಟನೊಬ್ಬನ ಜೊತೆ ಆ್ಯಕ್ಟ್ ಮಾಡಲು ಒಲ್ಲೆ ಎಂದಿದ್ದಾರೆ 

7) ಕಾರು ಬಿಟ್ಟು ಜಾವಾ ಬೈಕ್ ಏರಿದ ಕಿಚ್ಚ ಸುದೀಪ್!

Gas cylinder price to Rashmika mandanna top 10 news of December 3

ದಬಾಂಗ್ -3 ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ ಕಿಚ್ಚ ಸುದೀಪ್. ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದು ಈ ಟೈಮಲ್ಲಿ ಸುದೀಪ್ ಜಾವಾ ಬೈಕ್ ಏರಿ ಪೋಸ್ ಕೊಟ್ಟಿದ್ದಾರೆ. 

8) ಕೊನೆಗೂ ಪತ್ತೆಯಾಯ್ತು ವಿಕ್ರಮ್ ಲ್ಯಾಂಡರ್: ಫೋಟೋ ಬಿಡುಗಡೆಗೊಳಿಸಿದ ನಾಸಾ!

Gas cylinder price to Rashmika mandanna top 10 news of December 3

ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳ ಪತ್ತೆ ಹಚ್ಚಿದ ನಾಸಾ| ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಅವಶೇಷಗಳು ಪತ್ತೆ| ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ| ಪತನಗೊಂಡ ಸ್ಥಳದ ಚಿತ್ರ ಸೆರೆಹಿಡಿದ ನಾಸಾದ ಲೂನಾರ್ ಆರ್ಬಿಟರ್

9) ಈರುಳ್ಳಿ ತರಂಗಿಲ್ಲ, ಬೇಯಿಸಂಗಿಲ್ಲ: ಸಿಲಿಂಡರ್ ಬೆಲೆ ಏರಿದೆಯಲ್ಲ!.

Gas cylinder price to Rashmika mandanna top 10 news of December 3

ಬೆಲೆ ಏರಿಕೆಯ ಗುಮ್ಮ ಜನಸಾಮಾನ್ಯರನ್ನು ನಿರಂತರವಾಗಿ ಕಾಡುತ್ತಿದ್ದು, ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಇದೀಗ ಎಲ್‌ಪಿಜಿ ದರ ಏರಿಕೆಯ ಬಿಸಿ ತಟ್ಟಿದೆ.

10) ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!

Gas cylinder price to Rashmika mandanna top 10 news of December 3

ಹೆಲ್ಮೆಟ್ ಹಾಕದ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಹಿಡಿದು ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಸವಾರ ತನ್ನ ಬೈಕನ್ನೇ ಪುಡಿ ಮಾಡಲು ಯತ್ನಿಸಿದ್ದಾನೆ. ಈ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. 
 

Follow Us:
Download App:
  • android
  • ios