ಸಾಮೂಹಿಕ ಅತ್ಯಾಚಾರದ ವಿಡಿಯೋ ಮಾಡಿ ಮಹಿಳೆಗೆ ಬ್ಲಾಕ್ ಮೇಲ್
ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ದುಷ್ಕರ್ಮಿಗಳು ವಿಡಿಯೋ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಗೌತಮಕ್ಷೇತ್ರ ನಿರ್ಜನ ಪ್ರದೇಶದ ಬಳಿ ನಡೆದಿದೆ. ಅತ್ಯಾಚಾರದ ವಿಡಿಯೋ ಮಾಡಿಕೊಂಡು, ಕರೆದಾಗಲೆಲ್ಲ ಬರುವಂತೆ ದುಷ್ಕರ್ಮಿಗಳು ಬ್ಲಾಕ್ಮೇಲ್ ಮಾಡುತ್ತಿದ್ದರು. ತಡರಾತ್ರಿ ಶ್ರೀರಂಗಪಟ್ಟಣ ಠಾಣೆಗೆ ನೊಂದ ಮಹಿಳೆ ದೂರು ನೀಡಿದ್ದಾರೆ.
ಮಂಡ್ಯ (ಜೂ. 14): ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ದುಷ್ಕರ್ಮಿಗಳು ವಿಡಿಯೋ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಗೌತಮಕ್ಷೇತ್ರ ನಿರ್ಜನ ಪ್ರದೇಶದ ಬಳಿ ನಡೆದಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಶ್ರೀರಂಗಪಟ್ಟಣ ಗೌಡಹಳ್ಳಿ ಗ್ರಾಮದವರು. ಇದೇ ಗ್ರಾಮದ ಸಂಜಯ್, ಬಿಡ್ಡಾ, ರಮೇಶ್ ಎಂಬುವವರು ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಜೂ.4 ರಂದು ಕರಿಘಟ್ಟ ದೇವಾಲಯಕ್ಕೆ ತೆರಳುವಾಗ ಕಾರಿನಲ್ಲಿ ಕಿಡ್ನಾಪ್ ಮಾಡಿ, ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರದ ವಿಡಿಯೋ ಮಾಡಿಕೊಂಡು, ಕರೆದಾಗಲೆಲ್ಲ ಬರುವಂತೆ ದುಷ್ಕರ್ಮಿಗಳು ಬ್ಲಾಕ್ಮೇಲ್ ಮಾಡುತ್ತಿದ್ದರು. ತಡರಾತ್ರಿ ಶ್ರೀರಂಗಪಟ್ಟಣ ಠಾಣೆಗೆ ನೊಂದ ಮಹಿಳೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ಜೂ.4 ರಂದು ನಡೆದಿದ್ದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ.