Asianet Suvarna News Asianet Suvarna News

ಗಣೇಶ ಹಬ್ಬದ ಹೊಸ ಮಾರ್ಗಸೂಚಿ, ಡಗ್ರ್ಸ್ ಸಂಕಟದಲ್ಲಿ ಅನುಶ್ರಿ; ಸೆ.9ರ ಟಾಪ್ 10 ಸುದ್ದಿ!

ಡ್ರಗ್ಸ್ ಸೇವೆನೆ ಹಾಗೂ ಮಾರಾಟದಲ್ಲಿ ಅನುಶ್ರೀಗೆ ಹೆಸರು ಕೇಳಿಬಂದಿರುವುದು ಸಂಕಷ್ಟ ಹೆಚ್ಚಾಗಿದೆ. 2014ರಿಂದ ಇಲ್ಲೀವರೆಗೆ ಕಾಂಗ್ರೆಸ್ ಪಕ್ಷ ತೊರೆದವರ ಸಂಖ್ಯೆ ಕುರಿತು ವರದಿ ಬಿಡುಗಡೆಯಾಗಿದೆ. ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಗುಡ್ ನ್ಯೂಸ್ ಸಿಕ್ಕಿದೆ. ಸಾರ್ವಜನಿಕ ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ಆದೇಶ ಹೊರಡಿಸಿದೆ. ಯಶ್ ಕಾಲ್‌ಶೀಟ್, ಕಲಬುರಗಿ ಗುದ್ದಾಟ ಸೇರಿದಂತೆ ಸೆಪ್ಟೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Ganesha festival Karnataka to Drug case Anushree top 10 News of september 9 ckm
Author
Bengaluru, First Published Sep 9, 2021, 5:07 PM IST

ಕಾಂಗ್ರೆಸ್ ತೊರೆದವರು ಹೆಚ್ಚು, ಬಿಜೆಪಿ ಸೇರಿದವರು ಮತ್ತಷ್ಟು; 2014-21ರ ವಲಸೆ ನಾಯಕರ ಅಧ್ಯಯನ ವರದಿ!

Ganesha festival Karnataka to Drug case Anushree top 10 News of september 9 ckm

ಚುನಾವಣೆ ಸಮೀಪಿಸುತ್ತಿದ್ದಂತೆ ಇತ್ತೀಚೆಗೆ ಪಕ್ಷ ತೊರೆದು ಬೇರೆ ಪಕ್ಷ ಸೇರುವವರ ಸಂಖ್ಯೆ ಹೆಚ್ಚಿದೆ. ಕೆಲ ನಾಯಕರು ಮಂತ್ರಿಗಿರಿ ಸಿಗುವ ವರೆಗೂ ಪಕ್ಷ ಬದಲಾಯಿಸಿ ತಮ್ಮ ಬೇಳೆ ಬೇಯಿಸಿಕೊಂಡವರಿದ್ದಾರೆ. ಇದೀಗ ನಾಯಕರ ವಲಸೆ ಪರ್ವ ಕುರಿತು ಅಧ್ಯಯನ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷ ಸೇರಿದವರ ಸಂಖ್ಯೆ ಅತೀ ಹೆಚ್ಚು.

ಮ್ಯಾಂಚೆಸ್ಟರ್ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಗೆ ಸಿಕ್ತು ಗುಡ್‌ ನ್ಯೂಸ್‌..!

Ganesha festival Karnataka to Drug case Anushree top 10 News of september 9 ckm

 ಓವಲ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ 157 ರನ್‌ಗಳ ಗೆಲುವು ದಾಖಲಿಸಿ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಪಾಲಿಗೆ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ನಟ ಯಶ್ ಕಾಲ್‌ಶೀಟ್‌ ಇಲ್ಲದೆ ವಾಪಸ್ ಆದ ಬಾಲಿವುಡ್ ಪ್ರೊಡ್ಯೂಸರ್‌ಗಳು

Ganesha festival Karnataka to Drug case Anushree top 10 News of september 9 ckm

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ಮಾಡಬೇಕು ಎಂದು ಬಾಲಿವುಡ್‌ನಿಂದ ನಿರ್ಮಾಪಕರು ಬರುತ್ತಿದ್ದಾರ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಯಶ್ ಸೈಲೆಂಟ್ ಆಗಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಯಾವ ಸದ್ಯ ಕಾಲ್‌ಶೀಟ್‌ ಫ್ರೀ ಇಲ್ಲ ಎಂದಿದ್ದಾರೆ. ಕಾಲ್‌ಶೀಟ್‌ ಇಲ್ಲ ಎಂದು ನಿರ್ಮಾಪಕರು ಮುಂಬೈಗೆ ವಾಪಸ್ ಆಗಿದ್ದಾರೆ

CCB ಚಾರ್ಜ್‌ಶೀಟ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಉಲ್ಲೇಖ

Ganesha festival Karnataka to Drug case Anushree top 10 News of september 9 ckm

ಕಿರುತೆರೆ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ. ಅನುಶ್ರೀ ಡ್ರಗ್ಸ್ ಸೇವಿಸುವುದು ಮಾತ್ರವಲ್ಲ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂಬ ದೊಡ್ಡ ಸುದ್ದಿ ಹೊರ ಬಂದಿದೆ. ಮಂಗಳೂರು ಸಿಸಿಬಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ

ಗಣೇಶ ಹಬ್ಬದ ಸಂಭ್ರಮದ ಮಧ್ಯೆ ಚಿನ್ನದ ದರದಲ್ಲಿ ದಾಖಲೆಯ ಇಳಿಕೆ

Ganesha festival Karnataka to Drug case Anushree top 10 News of september 9 ckm

ಗೌರಿ ಗಣೇಶ ಹಬ್ಬ ಬಂದಿದೆ. ಹೀಗಿರುವಾಗ ಖರೀದಿಯೂ ಜೋರಾಗೇ ಇರುತ್ತದೆ. ಸದ್ಯ ಈ ಹಬ್ಬದ ಸಂದರ್ಭದಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಚಿನ್ನ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ.

ಸ್ವಿಮಿಂಗ್‌ ಪೂಲ್‌ನಲ್ಲಿ DSP, ಮಹಿಳಾ ಕಾನ್ಸ್ಟೇಬಲ್ ಅಶ್ಲೀಲ ಕೃತ್ಯ: ಮಗನೆದುರೇ ನಗ್ನ 'ಆಟ'!

Ganesha festival Karnataka to Drug case Anushree top 10 News of september 9 ckm

ಪೊಲೀಸ್ ಅಧಿಕಾರಿ ಹೀರಾಲಾಲ್ ಸೈನಿ ತಮ್ಮೆಲ್ಲಾ ಮಿತಿಗಳನ್ನು ಮೀರಿದ್ದಾರೆ. ಇವರು ಅಜ್ಮೀರ್ ಜಿಲ್ಲೆಯ ಬೇವಾರ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿದ್ದಾರೆ. ಡಿಎಸ್‌ಪಿ ಜೊತೆಗಿರುವ ಮಹಿಳೆ ಅವರೊಂದಿಗೇ ಕಾರ್ಯ ನಿರ್ವಹಿಸುವ ಮಹಿಳಾ ಕಾನ್ಸ್ಟೇಬಲ್ ಎಂಬುವುದು ಉಲ್ಲೇಖನೀಯ. ಅವರಿಬ್ಬರ ಜೊತೆ ಒಂದು ಮಗು ಕೂಡ ಈಜುಕೊಳದಲ್ಲಿ ಆಟವಾಡುತ್ತಿದ್ದು, ಇದು ಮಹಿಳಾ ಕಾನ್‌ಸ್ಟೇಬಲ್‌ಗೆ ಮಗು ಎನ್ನಲಾಗಿದೆ.

ಸಾರ್ವಜನಿಕ ಗಣೇಶ ಹಬ್ಬಕ್ಕೆ ಅನುಮತಿ ಹಿನ್ನೆಲೆ ಬೆಸ್ಕಾಂ ಇಲಾಖೆ ಹೊಸ ಆದೇಶ

Ganesha festival Karnataka to Drug case Anushree top 10 News of september 9 ckm

ಸಾರ್ವಜನಿಕ ಗಣೇಶ ಹಬ್ಬಕ್ಕೆ ಅನುಮತಿ ಹಿನ್ನೆಲೆ ಬೆಸ್ಕಾಂ ಇಲಾಖೆ ಹೊಸ ಆದೇಶ ನೀಡಿದೆ. ಪೆಂಡಾಲ್ ಹಾಕುವ ಪ್ರತಿವೊಬ್ಬರು 1200 ರೂ ಪಾವತಿಸಬೇಕು ಎಂದು ಆದೇಶ ನೀಡಿದೆ. 

ಕಲಬುರ್ಗಿ ಗದ್ದುಗೆ ಗುದ್ದಾಟ: ಜೆಡಿಎಸ್ ಜೊತೆ ಮೈತ್ರಿ ವಿಶ್ವಾಸದಲ್ಲಿ ಕಾಂಗ್ರೆಸ್

Ganesha festival Karnataka to Drug case Anushree top 10 News of september 9 ckm

ಪಾಲಿಕೆ ಗದ್ದುಗೆ ಗುದ್ದಾಟದಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಶ್ವಾಸದಲ್ಲಿ ಕಾಂಗ್ರೆಸ್. ಈ ಬಗ್ಗೆ ಬೆಂಗಳೂರಿನಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಮೋದಿ ಶೈಲಿ ಅನುಸರಿಸಿದ ತಾಲಿಬಾನ್: ಸ್ವಚ್ಛ ಅಪ್ಘಾನಿಸ್ತಾನ ಮಿಷನ್‌ ಆರಂಭ!

Ganesha festival Karnataka to Drug case Anushree top 10 News of september 9 ckm

ಅಫ್ಘಾನಿಸ್ತಾನದಲ್ಲಿ ಭಾರೀ ರಕ್ತಪಾತ ನಡೆಸಿ ಅಧಿಕಾರಕ್ಕೆ ಬಂದ ತಾಲಿಬಾನ್ ಈಗ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದೆ. ತಾಲಿಬಾನ್ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಹಂಚಿಕೊಂಡಿರುವ Talib Timew ಈ ಫೋಟೋ ಶೇರ್ ಮಾಡಿದೆ.

Follow Us:
Download App:
  • android
  • ios