ರಾಜ್ಯ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ತಂತ್ರ : ಉಸ್ತುವಾರಿಗೆ ತ್ರಿಮೂರ್ತಿಗಳು
ಉಪ ಚುನಾವಣೆಯನ್ನು ರಾಜ್ಯ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಡಿಸಿಎಂ ಜಿ. ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಸಿದ್ದುಗೆ ಜಮಖಂಡಿ, ಬಳ್ಳಾರಿಗೆ ಡಿಕೆಶಿ ಹಾಗೂ ಶಿವಮೊಗ್ಗಕ್ಕೆ ಜಿ.ಪರಮೇಶ್ವರ್ ಅವರನ್ನು ಕಾಂಗ್ರೆಸ್ ನೇಮಿಸಿದೆ
- ರಾಜ್ಯ ಉಪ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡ ಕಾಂಗ್ರೆಸ್
- ಶಿವಮೊಗ್ಗ, ಬಳ್ಳಾರಿ,ಜಮಖಂಡಿಗೆ ರಾಜ್ಯದ ಪ್ರಮುಖ ನಾಯಕರ ನೇಮಕ
- ಉಸ್ತುವಾರಿಗಳಾಗಿ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್