Asianet Suvarna News Asianet Suvarna News

ಸಿದ್ದು ಈಸ್ ಬ್ಯಾಕ್: ಬಂಡಾಯಕ್ಕೆ ಬೀಳುತ್ತಾ ಬ್ರೇಕ್?

ದೋಸ್ತಿ ಸರ್ಕಾರದಲ್ಲಿ ತೀವ್ರ ಬಂಡಾಯ! ವಿದೇಶದಿಂದ ಬಂದಿಳಿದ ಸಿದ್ದರಾಮಯ್ಯ! ಇಂದಿನಿಂದ ರಂಗೇರಲಿದೆ ರಾಜ್ಯ ರಾಜಕೀಯ! ಕೆ.ಸಿ ವೇಣುಗೋಪಾಲ್ ಜೊತೆ ಸಿದ್ದು ಮಹತ್ವದ ಚರ್ಚೆ ಸಾಧ್ಯತೆ! ಭಿನ್ನಮತಕ್ಕೆ ಪೂರ್ಣ ವಿರಾಮ ಹಾಕಲಿದ್ದಾರಾ ಸಿದ್ದರಾಮಯ್ಯ! ಯುರೋಪ್ ಪ್ರವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ 

ಬೆಂಗಳೂರು(ಸೆ.16): ಯುರೋಪ್ ಪ್ರವಾಸಕ್ಕೆ ತೆರಳಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಡರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಳೆದ ಒಂದು ವಾರದಿಂದ ಬೆಳಗಾವಿ ರಾಜಕಾರಣಕ್ಕೆ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ತರುತ್ತಿದೆ ಎನ್ನಲಾಗುತ್ತಿದೆ.

ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಮತ್ತು ಹೆಬ್ಬಾಳ್ಕರ್ ನಡುವಿನ ಸಮರಕ್ಕೆ ಸಿದ್ದರಾಮಯ್ಯ ಪೂರ್ಣ ವಿರಾಮ ಹಾಕಲಿದ್ದಾರಾ ಎಂಬುವುದು ತಿಳಿಯಲಿದೆ. ಇತ್ತ ಜಾರಹೊಳಿ ಸಹೋದರರನ್ನು ಬಿಜೆಪಿ ಸಂಪರ್ಕಿಸಿದ್ದು, ಆಪರೇಷನ್ ಕಮಲದಡಿಯಲ್ಲಿ ಪಕ್ಷ ಕರೆತರುವ ಸಿದ್ಧತೆಯೂ ನಡೆದಿದೆ ಎಂದು ಹೇಳಲಾಗುತ್ತಿದೆ.

ಇನ್ನು ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ ಮಹತ್ವದ ಚರ್ಚೆ ನಡೆಸೋ ಸಾಧ್ಯತೆ ಇದೆ. ಈ ಕುರಿತು ಹೆಚ್ಚಿನ ಮಾಹಿತಿಗಾಘಿ ಈವಿಡಿಯೋ ನೋಡಿ..