Asianet Suvarna News Asianet Suvarna News

ಮತ್ತೆ ಸಿಡಿದೆದ್ದ ಸಿದ್ದು: ಈ ಬಾರಿಯ ಕೋಪಕ್ಕೆ ಕಾರಣ?

ಮೈತ್ರಿ ಸಕಾರ್ಕಾರದ ವಿರುದ್ಧ ಸಿಡಿದೆದ್ದ ಸಿದ್ದಣ್ಣ! ದೋಸ್ತಿ ಸರ್ಕಾರದಲ್ಲಿ ಜೆಡಿಎಸ್ ನದ್ದೇ ದರ್ಬಾರ್?! ಮೈತ್ರಿ ಧರ್ಮ ಪಾಲಿಸದ ಜೆಡಿಎಸ್ ವಿರುದ್ದ ಸಿಟ್ಟು! ಬಿಜೆಪಿ ಕನಸು ನನಸಾಗುವ ಸಮಯ ಬಂದಿದೆಯಾ? 
 

ಬೆಂಗಳೂರು(ಆ.12): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಗಟ್ಟಿ ಆಯಸ್ಸೇ ಇಲ್ವಾ?. ಯಾವಾಗ ಈ ದೋಸ್ತಿ ಸರ್ಕಾರ ಉರುಳಿ ಬಿಡುತ್ತೋ ಅಂತಾ ಕಾಯ್ತಾ ಇರೋ ಬಿಜೆಪಿ ಕನಸು ನನಸಾಗುತ್ತಾ?.

ಇದ್ದಕ್ಕಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ವಿರುದ್ದ ಸಿಡಿದೆದ್ದಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಕೊಡ್ತಾ ಇದೆ. ಅಷ್ಟಕ್ಕೂ ಸಿದ್ದಣ್ಣ ಕೋಪಕ್ಕೆ ಕಾರಣವಾದರೂ ಏನು?. ಜೆಡಿಎಸ್ ಮಾಡಿದ ಯಡವಟ್ಟೇನು?. 

ಜೆಡಿಎಸ್ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂಬುದು ಸಿದ್ದರಾಮಯ್ಯ ಆರೋಪ ಎಂದು ಹೇಳಲಾಗಿದೆ. ಕಾಂಗ್ರೆಸ್ ಗೆ ಮಾಹಿತಿ ನೀಡದೆ ಆಡಳಿತಾತ್ಮಕ ನಿರ್ಧಾರಗಳನ್ನು ಜೆಡಿಎಸ್ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದೆ ಎಂಬುದೇ ಸಿದ್ದು ಕೋಪಕ್ಕೆ ಮೂಲ ಕಾರಣ ಎನ್ನಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..