Asianet Suvarna News Asianet Suvarna News

ನಮಗೆ ನೀರು ಸಾಕು, ಕಾವೇರಿ ತಿರುಗಿಸಿ: ತಮಿಳುನಾಡು ಬೇಡಿಕೆ?

ಕಾವೇರಿ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದ್ದು ಇದರಿಂದ ಹೆಚ್ಚಿನ ನೀರನ್ನು ಬಿಡಬಾರದು ಎಂದು ಕರ್ನಾಟಕ ಸರ್ಕಾರದ ಬಳಿ ತಮಿಳುನಾಡು ಸರ್ಕಾರ ಕೇಳಿಕೊಂಡಿದೆ.

Faking News Tamilnadu Ask To Karnataka To Stop Realesing Cauvery Water
Author
Bengaluru, First Published Aug 14, 2018, 12:49 PM IST

ಬೆಂಗಳೂರು :  ಕಾವೇರಿ ನದಿಯಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಪ್ರವಾಹದಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿರುವ ತಮಿಳುನಾಡು ಸರ್ಕಾರ ಕಾವೇರಿ ನದಿಯ ನೀರನ್ನು ಉತ್ತರ ಕರ್ನಾಟಕದ ಮಲಪ್ರಭಾ ನದಿಗೆ ತಿರುಗಿಸಿ ಎಂದು ಬೇಡಿಕೆ ಇಟ್ಟಿದೆ.

ಅಲ್ಲದೇ ಈ ಯೋಜನೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ. ಹೀಗಾಗಿ ಗೋವಾದ ಕ್ಯಾತೆ ಇಲ್ಲದೇ ಮಹದಾಯಿ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸಿವೆ. ಆದರೆ, ಮುಂದಿನ ವರ್ಷ ಮಳೆ ಆಗದೇ ಇದ್ದರೆ ಆ ನೀರನ್ನು ತಮಗೇ ಬಿಡಬೇಕು ಎಂದು ತಮಿಳುನಾಡು ಷರತ್ತು ವಿಧಿಸಿದೆ. ಹೀಗಾಗಿ ತಮಿಳುನಾಡಿಗೆ ಇನ್ನಷ್ಟುನೀರನ್ನು ಬಿಟ್ಟು ಪ್ರವಾಹ ಸೃಷ್ಟಿಸಿ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios