ಕೊರೋನಾ ನಡುವೆ ಭೂಕಂಪ ಶಾಕ್, ಇಳಿಕೆಯಾಯ್ತು ಗೋಲ್ಡ್ ರೇಟ್; ಏ.28ರ ಟಾಪ್ 10 ಸುದ್ದಿ!
ಕೊರೋನಾ ನಡುವೆ ಈಶಾನ್ಯ ಭಾರತಕ್ಕೆ ಭೂಕಂಪ ಶಾಕ್ ಎದುರಾಗಿದ್ದು 6.4 ರಷ್ಟು ತೀವ್ರತೆ ದಾಖಲಾಗಿದೆ. ಇತ್ತ ಕೊರೋನಾ ಹರಡಿದ್ದು ಯಾರು ಅನ್ನೋ ವಿಡಿಯೋ ಒಂದು ವೈರಲ್ ಆಗಿದೆ. ಭಾರತದ ಕೋವಿಡ್ ಸಂಕಷ್ಟಕ್ಕೆ ಆಸಿಸ್ ಕ್ರಿಕೆಟಿಗ ಬ್ರೆಟ್ ಲಿ ನೆರವು ನೀಡಿದ್ದಾರೆ. ಅಲ್ಲುಗೆ ಕೊರೋನಾ ಪಾಸಿಟಿವ್, ಉಮೇಶ್ ಕತ್ತಿ ಮಾತಿಗೆ ಭಾರಿ ಆಕ್ರೋಶ ಸೇರಿದಂತೆ ಏಪ್ರಿಲ್ 28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ದೇಶದಲ್ಲಿ ಕೊರೋನಾ 2ನೇ ಅಲೆ, ಹರಡಿಸಿದ್ದು ಯಾರು? ವೈರಲ್ ಆಯ್ತು ವಿಡಿಯೋ...
ದೇಶದಲ್ಲಿ ಕೊರೋನಾ ಎರಡನೇ ಅಲೆ ಅಪಾರ ಸಾವು ನೋವು ಉಂಟು ಮಾಡುತ್ತಿದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಒಂದನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದ ದೇಶದಲ್ಲಿ ಎರಡನೇ ಅಲೆ ಆರಂಭವಾಗಲು ಕಾರಣಕರ್ತರು ಯಾರು ಎಂಬ ಪ್ರಶ್ನೆಯೊಂದಿಗೆ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೋರಿರುವ ನಿರ್ಲಕ್ಷ್ಯ, ಸಿಎಂ ಉದ್ಧವ್ ಠಾಕ್ರೆ ಹಾಗೂ ಕೇಜ್ರೀವಾಲ್ ಆಡಿರುವ ಅಸಡ್ಡೆಯ ಮಾತುಗಳನ್ನೂ ನೀಡಲಾಗಿದೆ.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಪ್ರಕ್ರಿಯೆ ಹೇಗೆ? ಇಲ್ಲಿದೆ ವಿವರ!...
ಮೇ 01 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಕೊರೋನಾ ಲಸಿಕೆ ನೀಡಲಿದೆ. ಇದಕ್ಕಾಗಿ ರಿಜಿಸ್ಟ್ರೇಶನ್ ಕಡ್ಡಾಯವಾಗಿದೆ. ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಮಾಡಿಕೊಳ್ಳುವುದು ಹೇಗೆ?
ಕೊರೋನಾ ಸೋಂಕಿಗೆ ಪ್ರಧಾನಿ ಮೋದಿ ಚಿಕ್ಕಮ್ಮ ಬಲಿ!...
ಕೊರೋನಾ ಸೋಂಕಿಗೆ ತುತ್ತಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿಕ್ಕಮ್ಮ| ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ನರ್ಮಾದಾಬೆನ್
ಅಸ್ಸಾಂನಲ್ಲಿ 6.4 ರಷ್ಟು ತೀವ್ರತೆಯ ಭೂಕಂಪ: ನಡುಗಿದ ಈಶಾನ್ಯ ಭಾರತ!...
ಅಸ್ಸಾಂನ ಗುವಾಹಟಿ ಸೇರಿದಂತೆ ಈಶಾನ್ಯ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 7.55 ಕ್ಕೆ ಸಂಭವಿಸಿದ ಈ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4ರಷ್ಟು ದಾಖಲಾಗಿದೆ. ಅಸ್ಸಾಂನ ಸೋನಿತ್ಪುರ ಇದರ ಕೇಂದ್ರ ಬಿಂದು ಎಂದು ಹೇಳಲಾಗಿದೆ.
14 ದಿನ ಜನತಾ ಕರ್ಫ್ಯೂ ಆರಂಭ: ಜೀವನಾವಶ್ಯಕ ಸೇವೆ ಬಿಟ್ಟು ಇನ್ನೆಲ್ಲವೂ ಬಂದ್!...
14 ದಿನ ಜನತಾ ಕರ್ಫ್ಯೂ ಆರಂಭ| ಜೀವನಾವಶ್ಯಕ ಸೇವೆ ಬಿಟ್ಟು ಇನ್ನೆಲ್ಲವೂ ಬಂದ್| ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ದಿನಸಿ ಖರೀದಿ| ಕೆಎಸ್ಆರ್ಟಿಸಿ, ಖಾಸಗಿ ಬಸ್, ಮೆಟ್ರೋ ಸ್ಥಗಿತ
ಭಾರತದ ಕೋವಿಡ್ ಸಂಕಷ್ಟಕ್ಕೆ ಮಿಡಿದ ಆಸೀಸ್ ಕ್ರಿಕೆಟಿಗ ಬ್ರೆಟ್ ಲೀ ಹೃದಯ...
ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ರಿಂದ ಸ್ಪೂರ್ತಿಗೊಂಡ ಮಾಜಿ ವೇಗಿ ಬ್ರೆಟ್ ಲೀ ಇದೀಗ ಕೋವಿಡ್ 19 ವಿರುದ್ದ ಭಾರತದ ಹೋರಾಟಕ್ಕೆ ಅಂದಾಜು 41 ಲಕ್ಷ ರುಪಾಯಿ ಮೊತ್ತದ ಒಂದು ಬಿಟ್ ಕಾಯಿನ್ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಸ್ಟೈಲಿಷ್ ಸ್ಟಾರ್ ಅಲ್ಲುಗೆ ಕೊರೋನಾ ಪಾಸಿಟಿವ್...
ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 'ಅಲಾ ವೈಕುಂಠಪುರಮುಲೂ' ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಜನತಾ ಕರ್ಫ್ಯೂ: ಬಿಗ್ಬಾಸ್ಗಿಲ್ಲ ತೊಂದರೆ, ಧಾರಾವಾಹಿಗಳ ಕಥೆ ಏನು ?...
ಹದಿನಾಲ್ಕು ದಿನಗಳ ಲಾಕ್ಡೌನ್ ಶುರುವಾಗಿದೆ. ಅದಕ್ಕೂ ಮೊದಲೇ ಚಿತ್ರಮಂದಿರ ಬಂದ್ ಆಗಿದೆ. ಸಿನಿಮಾ, ಸೀರಿಯಲ್ ಶೂಟಿಂಗ್ಗೂ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಿತ್ಯ ಪ್ರಸಾರವಾಗೋ ಸೀರಿಯಲ್ಗಳು, ಬಿಗ್ ಬಾಸ್ನಂಥಾ ರಿಯಾಲಿಟಿ ಶೋಗಳ ಕತೆ ಏನಾಗಬಹುದು ಅನ್ನುವುದು ಸದ್ಯದ ಕುತೂಹಲ
ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತು ಹೋಗಿ ಎಂದ ಆಹಾರ ಸಚಿವ ಉಮೇಶ್ ಕತ್ತಿ!...
ಕೋವಿಡ್ ಮಹಾಮಾರಿ ಸೃಷ್ಠಿಸಿರುವ ಬಿಕ್ಕಟ್ಟಿನಿಂದ ಜನ ಸಂಕಷ್ಟದಲ್ಲಿದ್ದರೆ ಆಹಾರ ಸಚಿವ ಉಮೇಶ್ ಕತ್ತಿ ಮಾತ್ರ ಉಡಾಫೆ ಉತ್ತರ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಅತ್ತ ಜನತಾ ಕರ್ಫ್ಯೂ, ಇತ್ತ ಚಿನ್ನದ ದರದಲ್ಲಿ ಭರ್ಜರಿ ಇಳಿಕೆ!...
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಏಪ್ರಿಲ್ 28ರ ಗೋಲ್ಡ್ ರೇಟ್