Asianet Suvarna News Asianet Suvarna News

ಒಂದು ತಿಂಗಳಲ್ಲಿ 21 ಜನ ನಿಗೂಢ ಸಾವು, ಕಾರಣವೇನು?

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಒಂದು ತಿಂಗಳಲ್ಲಿ‌ 21 ಮಂದಿ ಮೃತಪಟ್ಟಿದ್ದು, ಸರಣಿ ಸಾವುಗಳಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ. 

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಒಂದು ತಿಂಗಳಲ್ಲಿ‌ 21 ಮಂದಿ ಮೃತಪಟ್ಟಿದ್ದು, ಸರಣಿ ಸಾವುಗಳಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ. ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಸ್ಮಶಾನ ಮೌನ ಆವರಿಸಿದ್ದು ಒಬ್ಬರ ಮನೆ ಮುಂದೆ ಒಬ್ಬರು ಓಡಾಡಲು ಭಯಪಡುತ್ತಿದ್ದಾರೆ. ಇಂದು ಅವರ ಮನೆಯಾಯ್ತು ನಾಳೆ ನಮ್ಮ ಮನೆಗೆ ಸಾವು ಬರಬಹುದು ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.