ಛತ್ತೀಸ್ಗಢಕ್ಕೆ ಇಂದು ನೂತನ ಸಿಎಂ : ಯಾರಿಗೆ ಪಟ್ಟ..?
ಪಂಚರಾಜ್ಯ ಚುನಾವಣೆ ಮುಕ್ತಾಯವಾಗಿದ್ದು, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈಗಾಗಲೇ ೨ ರಾಜ್ಯಗಳಿಗೆ ಮುಖ್ಯಮಂತ್ರಿಗಳ ಆಯ್ಕೆ ನಡೆದಿದ್ದು, ಇನ್ನೊಂದು ರಾಜ್ಯಕ್ಕೆ ಇಂದು ಆಯ್ಕೆ ನಡೆಯಲಿದೆ.
ನವದೆಹಲಿ: ಛತ್ತೀಸ್ಗಢದ ನೂತನ ಮುಖ್ಯಮಂತ್ರಿ ಆಯ್ಕೆ ಭಾನುವಾರ ನಡೆಯಲಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರವಿಡೀ ಕಸರತ್ತು ನಡೆಸಿದರು.
ದೆಹಲಿಯ ತುಘಲಕ್ ಲೇನ್ನಲ್ಲಿರುವ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಟಿ.ಎಸ್. ಸಿಂಗ್ ದೇವ್, ತಾಮ್ರಧ್ವಜ ಸಾಹು, ಭೂಪೇಶ್ ಬಘೆಲ್ ಹಾಗೂ ಚರಣದಾಸ ಮಹಾಂತ ಅವರ ಜತೆ ವಿಸ್ತೃತ ಮಾತುಕತೆ ನಡೆಸಿದರು.