Asianet Suvarna News Asianet Suvarna News

'ಆಪರೇಷನ್ ಕಮಲ ಮಾಡಲು ಹೋಗಿ ಅಬಾರ್ಷನ್ ಮಾಡಿಕೊಳ್ತಾರೆ'

ಪ್ರಸಕ್ತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತಮ್ಮದೇ ದಾಟಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

Congress MLC CM Ibrahim Reacts on Dissidence in his Party
Author
Bengaluru, First Published Sep 18, 2018, 5:08 PM IST

ಬೆಂಗಳೂರು (ಸೆ.18):  ಪ್ರಸಕ್ತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತಮ್ಮದೇ ದಾಟಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಇಂದು (ಮಂಗಳವಾರ) ಸುವರ್ಣನ್ಯೂಸ್ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂದ, ಯಾವುದೇ ಆಪರೇಷನ್ ಇಲ್ಲ, ನಮ್ಮದೆಲ್ಲಾ ನಾರ್ಮಲ್ ಡೆಲಿವರಿ. ಬಿಜೆಪಿಯವರು ಆಪರೇಷನ್ ಮಾಡಲು ಹೋಗಿ ಅಬಾರ್ಷನ್ ಮಾಡಿಕೊಳ್ತಾರೆ ಎಂದು ತಮ್ಮ ಹಾಸ್ಯ ಚಟಾಕೆಯ ಮಾತಿನಲ್ಲಿಯೇ ಬಿಜೆಪಿಯನ್ನು ಕುಟುಕಿದರು.

ಜಾರಕಿಹೊಳಿ ಬ್ರದರ್ಸ್ ಅಸಮಾಧಾನಗೊಂಡಿಲ್ಲ. ತಾಯಿ ಚಾಮುಂಡಿ ಆಶೀರ್ವಾದದಿಂದ ಪಾರ್ಲಿಮೆಂಟ್ ಚುನಾವಣೆ ವರೆಗೂ ಈ ಸರ್ಕಾರ ಸುಸೂತ್ರವಾಗಿ ನಡೆಯುತ್ತೆ. ಇದೆಲ್ಲಾ ಮಾದ್ಯಮದವರು ಬಿತ್ತಿದ ಕೃತಕವಾದ ಬೆಳೆಗಳು ಅಷ್ಟೇ ಎಂದರು.

ಡಿಕೆ ಶಿವಕುಮಾರ್ ಮೇಲೆ ಎಫ್ ಐ ಆರ್ ದಾಖಲಾದ್ರೂ ಹೆದರೋದಿಲ್ಲ. ಅವರು  ಅದನ್ನು ಸಮರ್ಥವಾಗಿ ಎದುರಿಸುತ್ತಾರೆ ಎಂದು ಹೇಳಿದರು.

Follow Us:
Download App:
  • android
  • ios