ಬದಲಾಗುತ್ತಾರಾ ಉಪ ಮುಖ್ಯಮಂತ್ರಿ : ಯಾರಿಗೆ ಪಟ್ಟ..?
ಡಿಸಿಎಂ ಪರಮೇಶ್ವರ್ ಬದಲಾವಣೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯಗೆ ಒತ್ತಡ ಹೇರಿದ್ದಾರೆ. ಪರಮೇಶ್ವರ್ ವಿರುದ್ಧ ತಿರುಗಿಬಿದ್ದಿರುವ ಶಾಸಕರು ಬದಲಾವಣೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು : ಉಪಮುಖ್ಯಮಂತ್ರಿ ಹುದ್ದೆಯನ್ನು ಬದಲಾವಣೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದಾರೆ. ಡಿಸಿಎಂ ಪರಮೇಶ್ವರ್ ಬದಲಾವಣೆಗೆ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯಗೆ ಒತ್ತಡ ಹೇರಿದ್ದಾರೆ.
ಕಾಂಗ್ರೆಸ್ ಶಾಸಕರ ಯಾವ ಮನವಿಗಳಿಗೂ ಡಿಸಿಎಂ ಪರಮೇಶ್ವರ್ ಸ್ಪಂದಿಸುತ್ತಿಲ್ಲ. ಡಿಸಿಎಂ ಸ್ಥಾನ ನಿಭಾಯಿಸುವಲ್ಲಿ ಪರಮೇಶ್ವರ್ ವಿಫಲವಾಗಿದ್ದಾರೆ. ಮೈತ್ರಿ ಸರ್ಕಾರ ಸುಭದ್ರವಾಗಿರಬೇಕಾದರೆ ಮೊದಲು ಡಿಸಿಎಂ ಬದಲಾವಣೆ ಮಾಡಿ ಎಂದು ಈ ಬಗ್ಗೆ ಸಿದ್ದರಾಮಯ್ಯ ಜೊತೆ ಜಾರಕಿಹೊಳಿ ಸಹೋದರರ ತಂಡವು ಚರ್ಚೆ ನಡೆಸಿದೆ.
ಡಿಸಿಎಂ ಬದಲಾವಣೆಗೆ ಪರೋಕ್ಷವಾಗಿ ಸಿದ್ದರಾಮಯ್ಯ ಅವರೂ ಕೂಡ ಬೆಂಬಲ ಸೂಚಿಸಿದ್ದು, ನಾಳೆ ಹೈಕಮಾಂಡ್ ಜೊತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದೂ ಕೂಡ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ದೇವೇಗೌಡ, ಕುಮಾರಸ್ವಾಮಿ ಜೊತೆ ಸೇರಿಕೊಂಡು ಸಿದ್ದರಾಮಯ್ಯ ವಿರುದ್ಧ ಕತ್ತಿ ಮಸಿಯುತ್ತಿದ್ದಾರೆ ಎನ್ನುವ ಆರೋಪ ಇದ್ದು, ಹೀಗಾಗಿ ಪರಮೇಶ್ವರ್ ಬದಲಾವಣೆಗೆ ಪರೋಕ್ಷವಾಗಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.