ವಿಷಕಂಠನಂತೆ ಬದುಕುತ್ತಿದ್ದೇನೆ: ಸಿಎಂ ಕಣ್ಣೀರು!
ಜೆಡಿಎಸ್ ಸಮಾವೇಶದಲ್ಲಿ ಸಿಎಂ ಕಣ್ನೀರು
ವಿಷಕಂಠನಂತೆ ಬದುಕುತ್ತಿದ್ದೇನೆ ಎಂದ ಸಿಎಂ
ಸಿಎಂ ಆಗಿದ್ದಕ್ಕೆ ಸಂತೋಷವಾಗಿಲ್ಲ ಎಂದ ಕುಮಾರಣ್ಣ
ಜನ ಮತ ಹಾಕುವಾಗ ನನ್ನನ್ನು ಮರೆಯುತ್ತಾರೆ
ಬೆಂಗಳೂರು(ಜು.14]): ಸಿಎಂ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ. ಜೆಪಿ ಭವನದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡುತ್ತಾ ಸಿಎಂ ಭಾವುಕರಾದರು.
ನಾನು ಸಿಎಂ ಆಗಿದ್ದಕ್ಕೆ ನೀವೆಲ್ಲಾ ಸಂತೋಷವಾಗಿದ್ದೀರಾ. ಆದರೆ ನಾನು ಮಾತ್ರ ಸಂತೋಷವಾಗಿಲ್ಲ. ವಿಷಕಂಠನ ರೀತಿಯಲ್ಲಿ ನೊವು ನುಮಗಿ ಬದುಕುತ್ತಿದ್ದೇನೆ ಎಂದು ಸಿಎಂ ಕಣ್ನೀರು ಹಾಕಿದರು.
ನಾನು ಹೋದ ಕಡೆಯಲ್ಲಿ ಜನ ಸಾಕಷ್ಟು ಸೇರುತ್ತಾರೆ. ಆದರೆ ಮತ ನೀಡುವಾಗ ಮಾತ್ರ ಯಾಕೋ ಮರೆಯುತ್ತಾರೆ. ಹಗಲೂ ರಾತ್ರಿ ನನ್ನ ಆರೋಗ್ಯ ಲೆಕ್ಕಿಸದೇ ಕಷ್ಟ ಪಟ್ಟಿದ್ದೇನೆ. ಎರಡನೇ ಬಾರಿ ಆಪರೇಶನ್ ಆದಾಗ ವಿಶ್ರಾಂತಿ ಪಡೆಯದೇ ಕಷ್ಟ ಪಟ್ಟಿದ್ದೇನೆ ಎಂದು ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು.