Asianet Suvarna News Asianet Suvarna News

ಕೈ ಕಳೆದುಕೊಂಡ ಜೆಸ್ಕಾಂ ನೌಕರ ಅಮರೇಶನಿಗೆ ನೆರವಿನ ಹಸ್ತ

ಜೆಸ್ಕಾಂ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡೂ ಕೈ ಕಳೆದುಕೊಂಡ ಯುವಕ ಅಮರೇಶ್(21) ಅವರಿಗೆ ಕೃತಕ ಕೈಅಳವಡಿಸಲು ತಗಲುವ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಅಮರೇಶ್, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಜೆಸ್ಕಾಂನಲ್ಲಿ ಕಿರಿಯ ಲೈನ್‌ಮೆನ್ ಆಗಿ ಕೆಲಸ ಮಾಡಿದ್ದರು. ಆರು ತಿಂಗಳ ಹಿಂದೆ ವಿದ್ಯುತ್ ದುರಸ್ತಿ ಕಾರ್ಯ ಮಾಡಲು ಕಂಬ ಏರಿದ್ದಾಗ ಮೇಲಾಧಿಕಾರಿಗಳು ವಿದ್ಯುತ್ ಆನ್ ಮಾಡಿದ ಪರಿಣಾಮ ಕೆಲಸದಲ್ಲಿ ನಿತರಾಗಿದ್ದ ಅಮರೇಶ್ ಎರಡೂ ಕೈಗಳನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗಿತ್ತು. ಆದರೆ ಇಲಾಖೆ ಅಧಿಕಾರಿಗಳು ಮಾತ್ರ ಯುವಕನಿಗೆ ಸ್ಪಂದಿಸುವ ಕೆಲಸ ಮಾಡಿರಲಿಲ್ಲ. ಹಲೋ ಸಿಎಂ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ನೇರವಾಗಿ ಸ್ಪಂದಿಸಿದ್ದಾರೆ.

CM HD Kumaraswamy in Suvarna news gescom Employee Amaresh to get job

ಕೈ ಕಳೆದುಕೊಂಡ ಜೆಸ್ಕಾಂ  ನೌಕರ ಅಮರೇಶನಿಗೆ ನೆರವಿನ ಹಸ್ತ

ಜೆಸ್ಕಾಂ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡೂ ಕೈ ಕಳೆದುಕೊಂಡ ಯುವಕ ಅಮರೇಶ್(21) ಅವರಿಗೆ ಕೃತಕ ಕೈಅಳವಡಿಸಲು ತಗಲುವ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಅಮರೇಶ್, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಜೆಸ್ಕಾಂನಲ್ಲಿ ಕಿರಿಯ ಲೈನ್‌ಮೆನ್ ಆಗಿ ಕೆಲಸ ಮಾಡಿದ್ದರು. ಆರು ತಿಂಗಳ ಹಿಂದೆ ವಿದ್ಯುತ್ ದುರಸ್ತಿ ಕಾರ್ಯ ಮಾಡಲು ಕಂಬ ಏರಿದ್ದಾಗ ಮೇಲಾಧಿಕಾರಿಗಳು ವಿದ್ಯುತ್ ಆನ್ ಮಾಡಿದ ಪರಿಣಾಮ ಕೆಲಸದಲ್ಲಿ ನಿತರಾಗಿದ್ದ ಅಮರೇಶ್ ಎರಡೂ ಕೈಗಳನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗಿತ್ತು. ಆದರೆ ಇಲಾಖೆ ಅಧಿಕಾರಿಗಳು ಮಾತ್ರ ಯುವಕನಿಗೆ ಸ್ಪಂದಿಸುವ ಕೆಲಸ ಮಾಡಿರಲಿಲ್ಲ. ಹಲೋ ಸಿಎಂ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ನೇರವಾಗಿ ಸ್ಪಂದಿಸಿದ್ದಾರೆ.

Video Top Stories