Asianet Suvarna News Asianet Suvarna News

ವಿದ್ಯಾರ್ಥಿನಿ ಮೇಲೆ ರೇಪ್‌ ಪ್ರಕರಣಕ್ಕೆ ತಿರುವು: ಸಂತ್ರಸ್ತಳ ವಿರುದ್ಧವೇ ಸುಲಿಗೆ ದೂರು!

ವಿದ್ಯಾರ್ಥಿನಿ ಮೇಲೆ ರೇಪ್‌ ಪ್ರಕರಣಕ್ಕೆ ತಿರುವು: ಸಂತ್ರಸ್ತಳ ವಿರುದ್ಧವೇ ಸುಲಿಗೆ ದೂರು!| ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಬಂಧನ| ಅತ್ಯಾಚಾರ ಪ್ರಕರಣ ಕೈಬಿಟ್ಟಅಧಿಕಾರಿಗಳು: ವಿವಾದ ಸೃಷ್ಟಿ| ಸ್ವಾಮಿ ಬೆಂಬಲಿಗರಿಂದ ವಿದ್ಯಾರ್ಥಿನಿ ವಿರುದ್ಧ ಪ್ರತಿದೂರು

Chinmayananda Case Shahjahanpur rape victim may be charged with extortion
Author
Bangalore, First Published Sep 21, 2019, 8:54 AM IST

ಶಹಜಹಾನ್‌ಪುರ[ಸೆ.21]: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ, ಸ್ವಾಮಿ ಚಿನ್ಮಯಾನಂದರನ್ನು ಎಸ್‌ಐಟಿ ಪೊಲೀಸರು ಶುಕ್ರವಾರ ಬಂಧಿಸಲಾಗಿತ್ತು. ಪ್ರಕರಣವೀಗ ತಿರುವು ಪಡೆದಿದ್ದು, ಮಾಜಿ ಸಚಿವನ ವಿರುದ್ಧ ಅತ್ಯಾಚಾರ ಪ್ರಕರಣ ಕೈಬಿಟ್ಟಅಧಿಕಾರಿಗಳು ಆರೋಪಿತ ವಿದ್ಯಾರ್ಥಿನಿ ಮೇಲೆಯೇ ಸುಲಿಗೆ ಪ್ರಕರಣ ದಾಖಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ವಿದ್ಯಾರ್ಥಿನಿ ಸುಲಿಗೆ ಮಾಡಲು ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾಳೆ ಎಂದು ಬೆಂಬಲಿಗರು ಪ್ರತಿದೂರು ಸಲ್ಲಿಸಿದ್ದಾರೆ. ಈ ಕುರಿತಂತೆ ವಿದ್ಯಾರ್ಥಿನಿಗೆ ಪರಿಚಿತರಿದ್ದ ಮೂವರನ್ನು ಪೊಲೀಸರು ಬಂಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸ್ವಾಮಿ ಚಿನ್ಮಯಾನಂದಗೆ ಸೇರಿದ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಚಿನ್ಮಯಾನಂದ ಅವರು ನನ್ನ ಮೇಲೆ ಅತ್ಯಾಚಾರ ನಡೆಸಿ, ದೈಹಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ದೆಹಲಿ ಪೊಲೀಸರಿಗೆ ತಿಂಗಳ ಹಿಂದೆ ದೂರು ನೀಡಿದ್ದಳು.

ಅದರಂತೆ ಕೇಂದ್ರದ ಮಾಜಿ ಸಚಿವನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ವಿದ್ಯಾರ್ಥಿನಿಯಿಂದ ಮಸಾಜ್‌ ಮಾಡಿಕೊಂಡಿದ್ದಾಗಿ ಸ್ವಾಮಿ ಒಪ್ಪಿಕೊಂಡಿದ್ದ ಎನ್ನಲಾಗಿದೆ.

Follow Us:
Download App:
  • android
  • ios