Asianet Suvarna News Asianet Suvarna News

ಶತ್ರು ನೆಲದಲ್ಲಿ ತುಟಿ ಬಿಚ್ಚದ ಮಗನಿಗೆ 'ಅಭಿನಂದನೆ' ಎಂದ ತಂದೆ!

ಪಾಕ್ ವಶದಲ್ಲಿರುವ ವಿಂಗ್ ಕಮಾಂಡರ್ ಸುರಕ್ಷಿತ ಬರುವಿಕಾಗಾಗಿ ಕಾಯುತ್ತಿದೆ ದೇಶ| ಮಗನ ಧೈರ್ಯ ಕೊಂಡಾಡಿದ ತಂದೆ ಸಿಂಹಕುಟ್ಟಿ ವರ್ತಮಾನ್| ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್| ಶತ್ರುಗಳಿಗೆ ರಹಸ್ಯ ಮಾಹಿತಿ ನೀಡದ ಮಗನಿಗೆ ಅಭಿನಂದನೆ| ಮಗ ಸುರಕ್ಷಿತವಾಗಿ ಮರಳಿ ಬರುವ ಭರವಸೆ ವ್ಯಕ್ತಪಡಿಸಿದ ಸಿಂಹಕುಟ್ಟಿ|

Captured IAF Pilot Abhinandan Father Reaction Await Positive News
Author
Bengaluru, First Published Feb 28, 2019, 2:52 PM IST

ನವದೆಹಲಿ(ಫೆ.28): ಪಾಕ್ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಸುರಕ್ಷಿತ ಬರುವಿಕೆಗಾಗಿ ಇಡೀ ದೇಶ ಕಾಯುತ್ತಿದೆ.

ಈ ಮಧ್ಯೆ ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಶತ್ರುಗಳಿಗೆ ಸೆರೆ ಸಿಕ್ಕ ಬಳಿಕವೂ ಬೆದರದೆ ಯಾವುದೇ ಮಾಹಿತಿ ನೀಡದ ಮಗನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಗ ಸುರಕ್ಷಿತವಾಗಿ ಮರಳಿ ಬರುವ ಭರವಸೆ ವ್ಯಕ್ತಪಡಿಸಿದ ಅವರು, ಆದರೆ ಶತ್ರುಗಳಿಗೆ ಮಗ ಯಾವುದೇ ರಹಸ್ಯ ಮಾಹಿತಿ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Captured IAF Pilot Abhinandan Father Reaction Await Positive News

ಇತ್ತ ವಿಂಗ್ ಕಮಾಂಡರ್ ಮರಳಿಕೆಗೆ ಪ್ರಾರ್ಥಿಸಿ ಉಡುಪಿಯ ಕಟಪಾಡಿ ಸಾಯಿ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Follow Us:
Download App:
  • android
  • ios