ಇಬ್ಬರು ಪ್ರಭಾವಿ ಜೆಡಿಎಸ್ ಶಾಸಕರಿಗೂ ಬಿಜೆಪಿ ಗಾಳ
ಕಾಂಗ್ರೆಸ್ ಶಾಸಕರ ಸಂಪರ್ಕದಲ್ಲಿರುವ ಬಿಜೆಪಿ ಇದೀಗ ಜೆಡಿಎಸ್ಸಿನ ಇಬ್ಬರು ಶಾಸಕರನ್ನು ಸೆಳೆಯಲು ಮುಂದಾಗಿದೆ. ಯಾದಗಿರಿಯ ಗುರುಮಿಟ್ಕಲ್ ಶಾಸಕ ನಾಗನ ಗೌಡ ಕಂದಕೂರ ಹಾಗೂ ವಿಜಯಪುರ ಜಿಲ್ಲೆಯ ನಾಗಠಾಣ ಶಾಸಕ ದೇವಾನಂದ ಚೌಹಾನ್ ಅವರನ್ನು ಕಮಲ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿ.ಶ್ರೀರಾಮುಲು ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
- ಉತ್ತರ ಕರ್ನಾಟಕದ ಇಬ್ಬರು ಜೆಡಿಎಸ್ ಶಾಸಕರನ್ನು ಸೆಳೆಯಲು ಮುಂದಾದ ಬಿಜೆಪಿ
- ಗುರುಮಿಟ್ಕಲ್ ನಾಗನ ಗೌಡ ಕಂದಕೂರ ಹಾಗೂ ನಾಗಠಾಣ ದೇವಾನಂದ ಚೌಹಾನ್ ಬಿಜೆಪಿ ಸಂಪರ್ಕದಲ್ಲಿರುವ ಜೆಡಿಎಸ್ ಶಾಸಕರು