Asianet Suvarna News Asianet Suvarna News

ವೆಂಕಟ ರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಿಸದಂತೆ ಒತ್ತಾಯಿಸಿ ವಿಷ ಸೇವಿಸಿದ ಕಾರ್ಯಕರ್ತ

ಬಿಜೆಪಿ ಹಿರಿಯ ಮುಖಂಡ ವೆಂಕಟರಡ್ಡಿ ಮುದ್ನಾಳಗೆ  ಕ್ಷೇತ್ರ ಬದಲಾಗುತ್ತಿರುವ ಹಿನ್ನೆಲೆಯಲ್ಲಿ   ಕ್ಷೇತ್ರ ಬದಲಿಸದಂತೆ ಒತ್ತಾಯಿಸಿ ಕಾರ್ಯಕರ್ತನೊಬ್ಬ  ವಿಷ ಸೇವಿಸಲು ಯತ್ನಿಸಿದ್ದಾನೆ. 

BJP Leader Venkata Reddy Mudnal Fan Consume Poison

ಬೆಂಗಳೂರು (ಏ. 13): ಬಿಜೆಪಿ ಹಿರಿಯ ಮುಖಂಡ ವೆಂಕಟ ರೆಡ್ಡಿ ಮುದ್ನಾಳಗೆ  ಕ್ಷೇತ್ರ ಬದಲಾಗುತ್ತಿರುವ ಹಿನ್ನೆಲೆಯಲ್ಲಿ   ಕ್ಷೇತ್ರ ಬದಲಿಸದಂತೆ ಒತ್ತಾಯಿಸಿ ಕಾರ್ಯಕರ್ತನೊಬ್ಬ  ವಿಷ ಸೇವಿಸಲು ಯತ್ನಿಸಿದ್ದಾನೆ. 

ಗುರಮಠಕಲ್’ನಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿ ವೇದಿಕೆ ಮೇಲೆ ವಿಷ ಕುಡಿಯಲು  ವೆಂಕಟ ರೆಡ್ಡಿ ಮುದ್ನಾಳ ಅಭಿಮಾನಿ ಯತ್ನಿಸಿದ್ದಾನೆ.  ಗುರುಮಠಕಲ್ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವಂತೆ  ಸಭೆಯಲ್ಲಿ  ಕಾರ್ಯಕರ್ತರು ಒತ್ತಾಯಿಸಿದ್ದಾರೆ.  ಯಾದಗಿರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.  

ಗುರುಮಠಕಲ್ ಬದಲು ಯಾದಗಿರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದೆ.  ವೆಂಕಟ ರೆಡ್ಡಿ ಮುದ್ನಾಳ್ ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. 

Follow Us:
Download App:
  • android
  • ios