ಬಿಗ್ 3: ಹೆಚ್ಐವಿ ಪೀಡಿತ ಮಕ್ಕಳ ಬಾಳಲ್ಲಿ ಭರವಸೆಯ ಬೆಳಕು!
ಹೆಚ್ಐವಿ ಪೀಡಿತ ಮಕ್ಕಳ ಬಾಳಲ್ಲಿ ಭರವಸೆ ಬೆಳಕು
ಬಿಗೆ 3 ವರದಿ ಪ್ರಸಾರದ ಬಳಿಕ ಎಚ್ಚೆತ್ತುಕೊಂಡ ಬುಡಾ
ಮಕ್ಕಳಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಾಣ ವಿಚಾರ
ಶಾಸಕರಿಂದ ಸಮಸ್ಯೆ ಶೀಘ್ರದಲ್ಲೇ ಪರಿಹರಿಸುವ ಭರವಸೆ
ಬೆಳಗಾವಿ(ಜು.14): ಹೆಚ್ಐವಿ ಪೀಡಿತ ಮಕ್ಕಳಿಗೆ ಸೂರು ಕಲ್ಪಿಸಲು ಹೋರಾಡುತ್ತಿರುವ ಸುವರ್ಣನ್ಯೂಸ್ ಬಿಗ್ 3 ತಂಡಕ್ಕೆ ಜಯ ಸಿಗುವ ಲಕ್ಷಣ ಕಾಣುತ್ತಿದೆ. ನಗರದ ರಾಮತೀರ್ಥ ನಗರದಲ್ಲಿರುವ ಹೆಚ್ಐವಿ ಪೀಡಿತ ಮಕ್ಕಳ ಪೋಷಣಾ ಸಂಸ್ಥೆಗೆ ಪ್ರತ್ಯೇಕ ಕಟ್ಟಡದ ಅವಶ್ಯಕತೆ ಕುರಿತು ಬಿಗ್ 3 ಈ ಹಿಂದಯೇ ವರದಿ ಮಾಡಿತ್ತು.
ಅದರಂತೆ ಮಕ್ಕಳಿಗಾಗಿ ಈಗಾಗಲೇ ಕಟ್ಟಡ ಕಟ್ಟಲಾಗಿದ್ದು, ಕಾನೂನಾತ್ಮಕ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು ಎಂದು ಸ್ಥಳೀಯ ಶಾಸಕರು ಕೂಡ ಭರವಸೆ ನೀಡಿದ್ದರು.
ಹಾಗಾದರೆ ಹೆಚ್ಐವಿ ಪೀಡಿತ ಮಕ್ಕಳ ಕಟ್ಟಡ ವಿಚಾರ ಎಲ್ಲಿಗೆ ಬಂದಿದೆ. ಬಿಗಚ್3 ವರದಿ ಪ್ರಸಾರದ ಬಳಿಕ ಈ ಮಕ್ಕಳ ಬಾಳಲ್ಲಿ ಭರವಸೆಯ ಹೊಸ ಬೆಳಕೊಂದು ಕಾಣುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..