Asianet Suvarna News Asianet Suvarna News

ತೆರೆದ ಬಾವಿಗೆ ಬಿತ್ತು ತಡೆಗೋಡೆ; ಬಿಗ್ 3 ಗೆ ಯಶಸ್ಸಿನ ಗರಿ

ಮಾಧ್ಯಮ ಲೋಕದಲ್ಲೇ ವಿನೂತನ ಪ್ರಯೋಗ ಮಾಡುತ್ತಿದೆ ಸುವರ್ಣ ನ್ಯೂಸ್. ಜನಸಾಮಾನ್ಯರ ಸಮಸ್ಯೆಗಳನ್ನು ಜನಪ್ರತಿನಿಧಿಗಳ  ಮುಂದೆ ಇಡುವ ಬಿಗ್ 3 ಕಾರ್ಯಕ್ರಮದಲ್ಲಿ ಗದಗ ನಗರದ ಗಂಗಾಪುರ ಪೇಟೆಯಲ್ಲಿನ ಅಂಗನವಾಡಿ ಮುಂದೆ ತೆರೆದ ಬಾವಿಯಿತ್ತು. ಮಕ್ಕಳು ಆಟವಾಡುವ ವೇಳೆ ಚೂರು ಆಯತಪ್ಪಿದರೂ ಜೀವಕ್ಕೆ ಕುತ್ತು ಬರುವಂತಿತ್ತು. ಸಂಬಂಧಪಟ್ಟವರು ಇದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿದ್ದರು. ಬಿಗ್ 3 ಇದನ್ನು ಪ್ರಸಾರ ಮಾಡಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಕೂಡಲೇ ಬಾವಿ ಸುತ್ತ ಗೋಡೆ ಕಟ್ಟಿದ್ದಾರೆ. ಇದು ಬಿಗ್ 3 ಗೆ ಸಂದ ಯಶಸ್ಸು. 

ಮಾಧ್ಯಮ ಲೋಕದಲ್ಲೇ ವಿನೂತನ ಪ್ರಯೋಗ ಮಾಡುತ್ತಿದೆ ಸುವರ್ಣ ನ್ಯೂಸ್. ಜನಸಾಮಾನ್ಯರ ಸಮಸ್ಯೆಗಳನ್ನು ಜನಪ್ರತಿನಿಧಿಗಳ  ಮುಂದೆ ಇಡುವ ಬಿಗ್ 3 ಕಾರ್ಯಕ್ರಮದಲ್ಲಿ ಗದಗ ನಗರದ ಗಂಗಾಪುರ ಪೇಟೆಯಲ್ಲಿನ ಅಂಗನವಾಡಿ ಮುಂದೆ ತೆರೆದ ಬಾವಿಯಿತ್ತು. ಮಕ್ಕಳು ಆಟವಾಡುವ ವೇಳೆ ಚೂರು ಆಯತಪ್ಪಿದರೂ ಜೀವಕ್ಕೆ ಕುತ್ತು ಬರುವಂತಿತ್ತು. ಸಂಬಂಧಪಟ್ಟವರು ಇದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿದ್ದರು. ಬಿಗ್ 3 ಇದನ್ನು ಪ್ರಸಾರ ಮಾಡಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಕೂಡಲೇ ಬಾವಿ ಸುತ್ತ ಗೋಡೆ ಕಟ್ಟಿದ್ದಾರೆ. ಇದು ಬಿಗ್ 3 ಗೆ ಸಂದ ಯಶಸ್ಸು. 

Video Top Stories