Asianet Suvarna News Asianet Suvarna News

ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬ್ಯಾಂಕುಗಳು ಬಂದ್

ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬ್ಯಾಂಕ್ ಗಳು ಬಂದ್ ಆಗಿವೆ. ವೆತನ ಏರಿಕೆಗೆ ಆಗ್ರಹ, ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಬ್ಯಾಂಕ್ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. 

Bank Employees Protest Against Merger  Of Three Banks
Author
Bengaluru, First Published Dec 22, 2018, 9:29 AM IST

ದಾವ​ಣ​ಗೆರೆ :  ಶ್ರೇಣಿ 1ರಿಂದ ಶ್ರೇಣಿ 7ರ ಅಧಿಕಾ​ರಿ​ಗಳ ವೇತನ ಪರಿಷ್ಕ​ರ​ಣೆಗೆ ಸಮ್ಮತಿ ನೀಡು​ವುದೂ ಸೇರಿ​ದಂತೆ ವಿವಿಧ ಬೇಡಿಕೆ ಈಡೇ​ರಿ​ಸು​ವಂತೆ ಒತ್ತಾ​ಯಿಸಿ ಅಖಿಲ ಭಾರತ ಬ್ಯಾಂಕ್‌ ಅಧಿ​ಕಾ​ರಿ​ಗಳ ಒಕ್ಕೂ​ಟ​ದಿಂದ ಬ್ಯಾಂಕ್‌​ಗ​ಳನ್ನು ಬಂದ್‌ ಮಾಡುವ ಮೂಲಕ ನಗ​ರ​ದಲ್ಲಿ ಶುಕ್ರ​ವಾರ ಪ್ರತಿ​ಭ​ಟನೆ ನಡೆ​ಸ​ಲಾ​ಯಿತು.

ನಗ​ರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿ​ಯಾದ ಮಂಡಿ​ಪೇಟೆ ಶಾಖೆ ಎದುರು ಸಂಘ​ಟ​ನೆಯ ನೇತೃ​ತ್ವ​ದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತ​ನಾ​ಡಿದ ಸಂಘ​ಟನೆ ಕಾರ್ಯ​ದರ್ಶಿ ಕೆ.ಎ​ನ್‌.​ಗಿ​ರಿ​ರಾಜ, ಇಂಡಿ​ಯನ್‌ ಬ್ಯಾಂಕ್‌ ಅಸೋ​ಸಿ​ಯೇ​ಷನ್‌ ವಿರುದ್ಧ ಪ್ರತಿ ಬಾರಿಯೂ ನಮ್ಮ ಹಕ್ಕು ಪಡೆ​ಯಲು ಮುಷ್ಕರ ನಡೆ​ಸ​ಬೇ​ಕಾದ ಅನಿ​ವಾರ್ಯ ಪರಿ​ಸ್ಥಿತಿ ಬಂದೊದಗಿದೆ. ನಮ್ಮ ಬೇಡಿ​ಕೆ​ಗಳು ಪ್ರಮು​ಖ​ವಾ​ಗಿ ಶ್ರೇಣಿ 1ರಿಂದ ಶ್ರೇಣಿ 7ರ ಅಧಿ​ಕಾ​ರಿ​ಗಳ ವೇತನ ಪರಿಷ್ಕ​ರ​ಣೆಗೆ ಸಮ್ಮತಿ ನೀಡ​ಬೇಕು. ಸಲ್ಲಿ​ಸಿ​ರುವ ಬೇಡಿ​ಕೆ​ಗಳ ಪ್ರಕಾ​ರವೇ ವೇತನ ಪರಿ​ಷ್ಕರಣೆ​ಯಾ​ಗ​ಲೇ​ಬೇಕು ಎಂದು ಆಗ್ರ​ಹಿ​ಸಿ​ದರು.

ಐದು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್

ಬ್ಯಾಂಕ್‌​ಗಳ ವಿಲೀ​ನ​ವನ್ನು ಕೇಂದ್ರ ಸರ್ಕಾರ ಕೈಬಿ​ಡ​ಬೇಕು. ಲಾಭ​ದಾ​ಯಕ ಅಥವಾ ಪಾವ​ತಿ​ಸುವ ಸಾಮ​ರ್ಥ್ಯಕ್ಕೆ ತಳಕು ಹಾಕದೇ ಕನಿಷ್ಠ ವೇತನ ಸೂತ್ರದಲ್ಲೇ ವೇತನ ಪರಿ​ಷ್ಕರಣೆ​ಯಾ​ಗ​ಬೇಕು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿ​ಯಾ​ದ​ಲ್ಲಿ​ರುವ ಪ್ರಕಾರ ಎಲ್ಲಾ ಬ್ಯಾಂಕ್‌​ಗಳ ಅಧಿ​ಕಾ​ರಿ​ಗ​ಳಿಗೆ ವೈದ್ಯ​ಕೀಯ ವಿಮಾ ಯೋಜನೆ ನೀಡ​ಬೇಕು. ಸಾರ್ವ​ಜ​ನಿಕ ವಲಯದ ಬ್ಯಾಂಕ್‌​ಗಳ ವಿಲೀ​ನಕ್ಕೆ ನಮ್ಮ ಸಂಪೂರ್ಣ ವಿರೋ​ಧ​ವಿದೆ ಎಂದು ಹೇಳಿ​ದರು.

ರಾಷ್ಟ್ರೀ​ಕೃತ ಬ್ಯಾಂಕಿಂಗ್‌ ವ್ಯವ​ಸ್ಥೆ​ಯನ್ನು ದುರ್ಬ​ಲ​ಗೊ​ಳಿ​ಸುವ ಹುನ್ನಾ​ರ​ವನ್ನು ಕೈಬಿ​ಡ​ಬೇಕು. ಸಾರ್ವ​ಜ​ನಿಕ ಸ್ವಾಮ್ಯದ ಬ್ಯಾಂಕಿಂಗ್‌ ವ್ಯವ​ಸ್ಥೆ​ಯನ್ನು ಮತ್ತಷ್ಟುವಿಸ್ತಾ​ರ​ಗೊ​ಳಿ​ಸ​ಬೇಕು. ಎಲ್ಲಾ ರಾಷ್ಟ್ರೀ​ಕೃತ ಬ್ಯಾಂಕ್‌​ಗಳ ಅಸ್ತಿತ್ವವೂ ಉಳಿ​ಯ​ಬೇಕು. ಬ್ಯಾಂಕ್‌​ಗಳ ವಿಲೀ​ನಕ್ಕೆ ತುದಿ​ಗಾಲ ಮೇಲೆ ನಿಂತಿ​ರುವ ಕೇಂದ್ರ ಸರ್ಕಾರ ತನ್ನ ನಿಲುವು, ನಿರ್ಧಾ​ರ​ವನ್ನು ತಕ್ಷ​ಣವೇ ಹಿಂಪ​ಡೆ​ಯ​ಬೇಕು ಎಂದು ತಾಕೀತು ಮಾಡಿ​ದರು.

ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ಮುನಿಸು: ಅದರಲ್ಲಿರೋ ನಿಮ್ಮ ಹಣ ಬಾಸು?

ಕೆಲಸ ಹಾಗೂ ವೈಯ​ಕ್ತಿಕ ಜೀವ​ನದ ಮಧ್ಯ ಸಮ​ನ್ವಯ ಕಾಪಾಡಿ, 5 ದಿನ​ಗಳ ಬ್ಯಾಂಕಿಂಗ್‌ ಕೆಲ​ಸ​ವನ್ನು ಜಾರಿ​ಗೊ​ಳಿ​ಸ​ಬೇಕು. ಮೂಲ ಬ್ಯಾಂಕಿಂಗ್‌ ನಡೆಸಿ, ಅನು​ತ್ಪಾ​ದಕ ಆಸ್ತಿ​ಗಳ ಕಡಿ​ತಕ್ಕೆ ಆದ್ಯತೆ ನೀಡ​ಬೇಕು. ಎನ್‌​ಪಿ​ಎಸ್‌ ತೆಗೆದು ಹಾಕಿ, ಹಳೆಯ ಪಿಂಚಣಿ ಯೋಜ​ನೆ​ಯನ್ನು ಜಾರಿ​ಗೊ​ಳಿ​ಸ​ಬೇ​ಕೆಂಬುದೂ ಸೇರಿದಂತೆ ಸಂಘ​ಟ​ನೆಯ ಎಲ್ಲಾ ಬೇಡಿ​ಕೆ​ಗ​ಳನ್ನು ಈಡೇ​ರಿ​ಸು​ವಂತೆ ಅವರು ತಾಕೀತು ಮಾಡಿ​ದರು.

ಸಂಘ​ಟನೆ ಮುಖಂಡ​ರಾದ ಹರೀಶ, ಕೃಷ್ಣಪ್ಪ, ಆನಂದ​ಮೂರ್ತಿ, ಸುರೇಶ, ಭಾರತಿ, ಎಲ್ಲಾ ಬ್ಯಾಂಕ್‌​ಗಳ ಶಾಖೆಯ ಅಧಿ​ಕಾ​ರಿ​ಗಳು ಪ್ರತಿ​ಭ​ಟ​ನೆ​ಯ​ಲ್ಲಿ​ದ್ದರು.

Follow Us:
Download App:
  • android
  • ios