ಗೌರಿ - ಗಣೇಶ ಹಬ್ಬದ ದಿನವೇ ಬಿಎಸ್'ವೈಗೆ ಕಹಿ ಸುದ್ದಿ!
ಗೌರಿ - ಗಣೇಶ ಹಬ್ಬದ ದಿನವೇ ಬಿಎಸ್ವೈಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಸುಪ್ರೀಂ ಕೋರ್ಟ್ ಬಿಎಸ್ ವೈ ವಿರುದ್ಧ 15 ಕ್ಕೂ ಹೆಚ್ಚು ಕೇಸ್'ಗಳ ಮರು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಮೂಲಕ ಹೈಕೋರ್ಟ್ ರದ್ದುಗೊಳಿಸಿದ್ದ ಪ್ರಕರಣಗಳು ಮರುಜೀವ ಪಡೆದಿವೆ.
ಬೆಂಗಳೂರು(ಆ.25): ಗೌರಿ - ಗಣೇಶ ಹಬ್ಬದ ದಿನವೇ ಬಿಎಸ್ವೈಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಸುಪ್ರೀಂ ಕೋರ್ಟ್ ಬಿಎಸ್ ವೈ ವಿರುದ್ಧ 15 ಕ್ಕೂ ಹೆಚ್ಚು ಕೇಸ್'ಗಳ ಮರು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಮೂಲಕ ಹೈಕೋರ್ಟ್ ರದ್ದುಗೊಳಿಸಿದ್ದ ಪ್ರಕರಣಗಳು ಮರುಜೀವ ಪಡೆದಿವೆ.
ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಯಾವೆಲ್ಲ ಡಿ ನೋಟಿಫಿಕೇಷನ್ ಪ್ರಕರಣಗಳು ದಾಖಲಾಗಿದ್ದವೋ ಅವೆಲ್ಲವನ್ನೂ ಹೈ ಕೋರ್ಟ್ ರದ್ದುಗೊಳಿಸಿತ್ತು. ಹೀಗಾಗಿ ಈ ಪ್ರಕರಣಗಳನ್ನು ಸುಪ್ರೀಂ ಅಂಗಳಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಚಿಂತಿಸಿತ್ತು. ಇದಕ್ಕೆ ಪೂರಕವಾಗಿ ಶಿವಮೊಗ್ಗ ಮೂಲದ ಸಿರಾಜಿನ್ ಪಾಷಾ ಮತ್ತು ಬಾಲರಾಜ್ ಎಂಬ ಇಬ್ಬರು ವಕೀಲರು ದೂರು ನೀಡಿದ್ದರು. ಇವರಿಗೆ ರಾಜ್ಯ ಸರ್ಕಾರ ಸಾಥ್ ನೀಡಿದ್ದು, ಇದರ ಮರು ವಿಚಾರಣೆ ನಡೆಸುವಂತೆ ಸರ್ಕಾರ ಸುಪ್ರೀಂ ಮೊರೆ ಹೋಗಿತ್ತು. ಇದನ್ನು ಪರಿಶೀಲಿಸಿದ ಸುಪ್ರೀಂ ಕೇಸ್'ಗಳಿಗೆ ಮರುಜೀವ ನೀಡಿತ್ತು.
ಸುಪ್ರೀಂ ಇಂದು ಈ ಪ್ರಕರಣಗಳ ವಿಚಾರಣೆ ಆರಂಭಿಸಿದ್ದು, ಮುಂದಿನ 8 ವಾರಗಳ ಕಾಲ ಈ ವಿಚಾರಣೆಯನ್ನು ಮುಂದೂಡಿದೆ. ಇದನ್ನು ಗಮನಿಸಿದರೆ ರಾಜ್ಯ ಸರ್ಕಾರ ಬಿಎಸ್'ವೈ ವಿರುದ್ಧ ಸಮರ ಸಾರಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.