ಕಾಶ್ಮೀರ ವಿಷಯಕ್ಕೆ ಬಂದ್ರೆ ಸುಮ್ನಿರಲ್ಲ: ಒವೈಸಿ ಗುಡುಗು!
ಕಾಶ್ಮೀರ ಕುರಿತು ಅಸದುದ್ದೀನ್ ಒವೈಸಿ ಹೇಳಿಕೆ| ಕಾಶ್ಮೀರ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲವೇ?| ‘ಕಾಶ್ಮೀರ ಕುರಿತು ಮೂಗು ತೂರಿಸುವುದನ್ನು ನಿಲ್ಲಿಸಿ’| ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ಒವೈಸಿ| ‘ಭಾರತದ ಅವಿಭಾಜ್ಯ ಅಂಗ ಕಾಶ್ಮೀರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ’| ಕಾಶ್ಮೀರ ವಿಚಾರಕ್ಕೆ ಬಂದ್ರೆ ಪರಿಣಾಮ ನೆಟ್ಟಗಿರಲ್ಲ ಎಂದ ಒವೈಸಿ
ಹೈದರಾಬಾದ್(ಜ.20): ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವುದನ್ನು ಪಾಕಿಸ್ತಾನ ಈ ಕೂಡಲೇ ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಒತ್ತಾಯಿಸಿದ್ದಾರೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತದಿಂದ ಅದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒವೈಸಿ ಗುಡುಗಿದ್ದಾರೆ. ಕಾಶ್ಮೀರ ಪಡೆಯುವ ಕನಸು ಕಾಣುತ್ತಿರುವ ಪಾಕಿಸ್ತಾನ, ಈ ಕೂಡಲೇ ತನ್ನ ಹಸ್ತಕ್ಷೇಪ ನಿಲ್ಲಿಸಬೇಕು ಅವರು ಒತ್ತಾಯಿಸಿದರು. ಪಾಕ್ ಕಾಶ್ಮೀರದ ವಿಚಾರದಲ್ಲಿ ಕ್ಯಾತೆ ತೆಗೆದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಒವೈಸಿ ಎಚ್ಚರಿಸಿದ್ದಾರೆ.
Asaduddin Owaisi, AIMIM in Hyderabad: Pakistan should stop meddling in Kashmir affairs. Kashmir is and will always be an integral part of India. Even Kashmiris and Kashmir youth are an integral part. pic.twitter.com/fuf8kd1gsV
— ANI (@ANI) January 19, 2019
ಇದೇ ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎಂದಿರುವ ಒವೈಸಿ, ಈ ಪಕ್ಷಗಳಿಗೆ ಕಣಿವೆಗೆ ಸಂಬಂಧಿಸಿದಂತೆ ಯಾವುದೇ ನೀತಿ, ದೂರದೃಷ್ಟಿಯ ಯೋಜನೆ ಇಲ್ಲ ಎಂದು ಆರೋಪಿಸಿದರು.