Asianet Suvarna News Asianet Suvarna News

'ಆಪರೇಷನ್ ಕಮಲ ಸುಳ್ಳು, ಎಲ್ಲರೂ ನಮ್ಮ ಜೊತೆಯೇ ಇದ್ದಾರೆ ನೋಡಿ’

ಸಮ್ಮಿಶ್ರ ಸರ್ಕಾರ ಬೀಳಿಸಲು ಆಪರೇಷನ್ ಕಮಲ ವದಂತಿಯ ಹಿನ್ನಲೆಯಲ್ಲಿ ಪಕ್ಷದ ಮುಖ್ಯ ಕಚೇರಿಗೆ ಆಗಮಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೆಶ್ ಗುಂಡೂರಾವ್ ಅವರು ಬಳ್ಳಾರಿ ಶಾಸಕರನ್ನು ದಿಢೀರ್ ಆಹ್ವಾನಿಸಿದ್ದಾರೆ. ಇದರೊಂದಿಗೆ ಯಾವ ಶಾಸಕರು ಕೂಡ ಪಕ್ಷ ಬಿಟ್ಟು ಹೋಗುತ್ತಿಲ್ಲ ಎಲ್ಲರೂ ತಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದು ವಿರೋಧಿ ನಾಯಕರಿಗೆ ಸಂದೇಶ ನೀಡಲು ಈ ಸಭೆ ಕರೆಯಲಾಗಿದೆ ಎನ್ನಲಾಗಿದೆ.

  • ಬಳ್ಳಾರಿ ಶಾಸಕರನ್ನು ದಿಢೀರ್ ಆಹ್ವಾನಿಸಿದ ದಿನೇಶ್ ಗುಂಡೂರಾವ್
  • ಒಗ್ಗಟ್ಟು ಪ್ರದರ್ಶಿಸುವ ಕ್ರಮಕ್ಕೆ ಮುಂದಾದ ಕೆಪಿಸಿಸಿ ಅಧ್ಯಕ್ಷ