ರಾಜೀವ್ ಗಾಂಧಿ ಭಾರತ ರತ್ನ ವಿವಾದ: ಪಕ್ಷ ಬಿಡ್ತಿನಿ ಎಂದ ಶಾಸಕಿ!
ರಾಜೀವ್ ಗಾಂಧಿಗೆ ನೀಡಿದ್ದ ಭಾರತ ರತ್ನ ವಾಪಸ್?| ದೆಹಲಿ ವಿಧಾನಸಭೆಯಲ್ಲಿ ಒಕ್ಕೊರಲಿನ ನಿರ್ಣಯ| ಆಪ್ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದ ದೆಹಲಿ ವಿಧಾನಸಭೆ ನಿರ್ಣಯ| ನಿರ್ಣಯ ಪರ, ವಿರೋಧಿಗಳ ನಡುವೆ ತೀವ್ರ ತಿಕ್ಕಾಟ| ನಿರ್ಣಯ ವಿರೋಧಿಸಿದ ಆಪ್ ಶಾಸಕಿ ಅಲ್ಕಾ ಲಾಂಬಾ| ಆಪ್ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾದ ಶಾಸಕಿ
ನವದೆಹಲಿ(ಡಿ.22): 1984ರ ಸಿಖ್ ವಿರೋಧಿ ದಂಗೆ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ರಾಜೀವ್ ಗಾಂಧಿ ಅವರಿಗೆ ಪ್ರದಾನ ಮಾಡಲಾಗಿರುವ ಭಾರತ ರತ್ನ ಗೌರವವನ್ನು ವಾಪಸ್ ಪಡೆಯಬೇಕೆಂಬ ನಿರ್ಣಯವನ್ನು ದೆಹಲಿ ವಿಧಾನಸಭೆ ಅಂಗೀಕರಿಸಿದೆ. ಇದರಿಂದಾಗಿ ಆಮ್ ಆದ್ಮಿ ಪಕ್ಷದಲ್ಲಿ ತೀವ್ರ ಗೊಂದಲ ಉಂಟಾಗಿದೆ.
ದೆಹಲಿ ವಿಧಾನಸಭೆಯ ಈ ನಿರ್ಣಯ ವಿರೋಧಿಸಿ ಆಪ್ ಶಾಸಕಿ ಅಲ್ಕಾ ಲಾಂಬಾ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ನೀಡಿರುವುದು ಸರಿಯಾದ ನಿರ್ಣಯ ಎಂದು ಅಲ್ಕಾ ಲಾಂಬಾ ವಾದಿಸಿದ್ದಾರೆ.
ಈ ಮಧ್ಯೆ ತಮ್ಮ ಸರ್ಕಾರದ ನಿರ್ಣಯ ವಿರೋಧಿಸಿದ ಕಾರಣಕ್ಕೆ ಅಲ್ಕಾ ಲಾಂಬಾ ಅವರಿಗೆ ಶಾಸಕ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಆಪ್ ಒತ್ತಾಯಿಸಿದೆ. ಸರ್ಕಾರದ ನಿರ್ಣಯ ವಿರೋಧಿಸುವ ಮೂಲಕ ಅಲ್ಕಾ ಲಾಂಬಾ ಅಗೌರವ ತೋರಿದ್ದಾರೆ ಎಂಬುದು ಆಪ್ ವಾದವಾಗಿದೆ.
Manish Sisodia, Delhi Deputy Chief Minister on Alka Lamba: No resignation has been sought and from no one, all these are rumours pic.twitter.com/r2SCb4Bg8F
— ANI (@ANI) December 22, 2018
ಈ ಮಧ್ಯೆ ಆಪ್ ಶಾಸಕಿ ಅಲ್ಕಾ ಲಾಂಬಾ ರಾಜೀನಾಮೆಯನ್ನು ಕೇವಲ ವದಂತಿ ಎಂದು ಸ್ಪಷ್ಟಪಡಿಸಿರುವ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ, ಆಪ್ ಯಾರಿಂದಲೂ ರಾಜೀನಾಮೆ ಕೇಳಿಲ್ಲ ಎಂದು ಹೇಳಿದ್ದಾರೆ.
ರಾಜೀವ್ ಗಾಂಧಿಗೆ ನೀಡಿದ ಭಾರತ ರತ್ನ ವಾಪಸ್ ಪಡೆಯಲು ನಿರ್ಣಯ