Asianet Suvarna News Asianet Suvarna News

ಲೋಕ ಸಮರ ಹತ್ತಿರ, ಕರ್ನಾಟಕದ14 ಐಎಎಸ್ ಅಧಿಕಾರಿಗಳ ವರ್ಗ

ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇರುವಾಗಲೆ 14 ಐಎಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ನೀಡಿದೆ.

14 IAS Officers Transferred by Karnataka Government
Author
Bengaluru, First Published Feb 20, 2019, 11:41 PM IST

ಬೆಂಗಳೂರು[ಫೆ.20] ರಾಜ್ಯ ಸರಕಾರ 15 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ.  ಒಬ್ಬರು ಕೆಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.

ತುಷಾರ್ ಗಿರಿನಾಥ್  ಅವರನ್ನು ಬೆಳಗಾವಿ ವಲಯ ಪ್ರಾದೇಶಿಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ  BWSSB ಅಧ್ಯಕ್ಷರಾಗಿಯೂ ತುಷಾರ್ ಗಿರಿನಾಥ್ ಮುಂದುವರಿಯಲಿದ್ದಾರೆ.

ಎಸ್.ಬಿ.ಶೆಟ್ಟಣ್ಣನವರ್ ಅವರನ್ನು ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ ಎಂಡಿಯಾಗಿ ನೇಮಕ ಮಾಡಲಾಗಿದೆ. 

ಮಹತ್ವದ ವರ್ಗಾವಣೆ ಮತ್ತು ಸ್ಥಳ ನಿಯೋಜನೆ

ಡಾ.ಬಗದಿ ಗೌತಮ್ - ಚಿಕ್ಕಮಗಳೂರು ಜಿಲ್ಲಾಧಿಕಾರಿ 

S.S.ನಕುಲ್- ನಿರ್ದೇಶಕರು, IT & BT, ಬೆಂಗಳೂರು [ಉತ್ತರ ಕನ್ನಡ ಡಿಸಿಯಾಗಿದ್ದರು]

ಎಂ.ಕೆ.ಶ್ರೀರಂಗಯ್ಯ-ಆಯುಕ್ತ, ಉದ್ಯಮಶೀಲತೆ ಮತ್ತು ಜೀವನೋಪಾಯ ವಿಭಾಗ[ಚಿಕ್ಕಮಗಳೂರು ಡಿಸಿಯಾಗಿದ್ದರು]

ಜಿ.ಎನ್.ಶಿವಮೂರ್ತಿ-ದಾವಣಗೆರೆ ಜಿಲ್ಲಾಧಿಕಾರಿ

ಎಸ್.ಅಶ್ವಥಿ- ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸಿಇಒ 

GRJ ದಿವ್ಯ ಪ್ರಭು- ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ  ಆಯುಕ್ತ

ಎಚ್.ಬಸವರಾಜೇಂದ್ರ, ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ

GC ವೃಷಭೇಂದ್ರ ಮೂರ್ತಿ- ನಿರ್ದೇಶಕರು, MSME - ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಕ್ಕೆ ನಿರ್ದೇಶಕ

ಡಾ.ಕೆ.ಹರೀಶ್ ಕುಮಾರ್-ಉತ್ತರ ಕನ್ನಡ ಜಿಲ್ಲಾಧಿಕಾರಿ

ಪಾಟೀಲ್ ಯಲಗೌಡ-ಶಿವನಗೌಡ-ವಿಜಯಪುರ ಡಿಸಿ

ಸಿ.ಸತ್ಯಭಾಮ - ಚಾಮರಾಜನಗರ ಜಿಲ್ಲಾ ಪಂಚಾಯತ್ ಸಿಇಒ

 ಡಾ.ಕೆ.ಎನ್.ವಿಜಯ್ ಪ್ರಕಾಶ್ - ಹಾಸನ ಜಿಲ್ಲಾ ಪಂಚಾಯತ್ ಸಿಇಒ

ಕೆಎಎಸ್ ಅಧಿಕಾರಿ ಜಹೀರಾ ನಸೀಮಾ - MD, KERTC, ಕಲಬುರಗಿ

Follow Us:
Download App:
  • android
  • ios