Asianet Suvarna News Asianet Suvarna News

#MeToo ಸುಳಿಯಲ್ಲಿ ತಿಥಿ ಖ್ಯಾತಿ ಈರೇಗೌಡ : ಚಿತ್ರೋತ್ಸವದಿಂದ ಸಿನಿಮಾ ಔಟ್

ಇದುವರೆಗೂ ಬಂದ ಮೀ ಟೂ ಆರೋಪದಲ್ಲಿ ಇದು ಕರಾಳ ಕಹಾನಿ. ಮೀ ಟೂ ಅಭಿಯಾನ ಮೂಲಕ ತಿಥಿ ಖ್ಯಾತಿಯ ನಿರ್ದೇಶಕ ಈರೇಗೌಡ ಕರಾಳಮುಖ ಬಯಲಾಗಿದೆ. ಬಳೆ ಕೆಂಪ ಎನ್ನುವ ಸಿನಿಮಾಗಾಗಿ ಈರೇಗೌಡ ಜತೆಗೆ ಯುವತಿಯೊಬ್ಬರು ಕೆಲಸ ಮಾಡಿದ್ದರು. ಸ್ನೇಹಿತನ ಮನೆಗೆಂದು ಕರೆದುಕೊಂಡು ಹೋದ ನಿರ್ದೇಶಕ ಈರೇಗೌಡ  ಚಿತ್ರ ವಿಚಿತ್ರ ಹಿಂಸೆ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಇದುವರೆಗೂ ಬಂದ ಮೀ ಟೂ ಆರೋಪದಲ್ಲಿ ಇದು ಕರಾಳ ಕಹಾನಿ. ಮೀ ಟೂ ಅಭಿಯಾನ ಮೂಲಕ ತಿಥಿ ಖ್ಯಾತಿಯ ನಿರ್ದೇಶಕ ಈರೇಗೌಡ ಕರಾಳಮುಖ ಬಯಲಾಗಿದೆ. ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ ಯುವತಿ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ. ಬಳೆ ಕೆಂಪ ಎನ್ನುವ ಸಿನಿಮಾಗಾಗಿ ಈರೇಗೌಡ ಜತೆಗೆ ಯುವತಿಯೊಬ್ಬರು ಕೆಲಸ ಮಾಡಿದ್ದರು. ಸ್ನೇಹಿತನ ಮನೆಗೆಂದು ಕರೆದುಕೊಂಡು ಹೋದ ನಿರ್ದೇಶಕ ಈರೇಗೌಡ ಚಿತ್ರ ವಿಚಿತ್ರ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

ತನ್ನ ಬಾಳಲ್ಲಿ ಆದ ನೋವನ್ನು ಯುವತಿ ಮೀಟೂ ಅಭಿಯಾನದ ಮೂಲಕ  ಫೇಸ್ ಬುಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಈರೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಈರೇಗೌಡರ ಬಳೆಕೆಂಪ ಸಿನಿಮಾ ನವೆಂಬರ್ ಗೆ ನಡೆಯಲಿರುವ ಧರ್ಮಶಾಲಾ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಿಂದ ಔಟ್ ಆಗಿದೆ. ಅಲ್ಲದೆ ಫಿಲ್ಮ್ ಫೆಸ್ಟಿವಲ್ ಗೂ ಚಿತ್ರ ನಿರ್ದೇಶಕ ಈರೇಗೌಡಗೆ ಗೇಟ್ ಪಾಸ್ ನೀಡಲಾಗಿದೆ.

Video Top Stories