ಕನ್ನಡದ ಪ್ರತಿಷ್ಠಿತ ದಿನಪತ್ರಿಕೆ ಕನ್ನಡಪ್ರಭ ಹೊರತಂದಿದ್ದ ಸಂತ ಸೇವಾಲಾಲ್ ಜಯಂತಿಯ ವಿಶೇಷ ಸಂಚಿಕೆಗೆ ಅಪಾರ ಜನಮನ್ನಣೆ ದೊರೆತಿದೆ. ಇದೇ ಮೊದಲ ಸಾರಿ ವಿಶೇಷ ಸಂಚಿಕೆಯೊಂದು 2ನೇ ಮುದ್ರಣಕ್ಕೆ ಹೋಗುತ್ತಿದೆ.

ಬೆಂಗಳೂರು[ಫೆ.20] ಕನ್ನಡಪ್ರಭದ ವಿಶೇಷ ಸಂಚಿಕೆ ಸಂತ ಸೇವಾಲಾಲರ ಜೀವನ ಸಾಧನೆ, ಇತಿಹಾಸ ಎಲ್ಲವನ್ನು ಸಂಚಿಕೆ ಸುಂದರವಾಗಿ, ಸ್ಫುಟವಾಗಿ ನಿಮ್ಮ ಮುಂದೆ ಕಟ್ಟಿಕೊಡುತ್ತದೆ. ಬಂಜಾರ ಸಮುದಾಯದ ಆಚರಣೆ, ಜಾತ್ರೆ, ಪರಂಪರೆ, ವೇಷ-ಭೂಷಣ, ವೈವಿಧ್ಯತೆ ಸೇರಿದಂತೆ ನಮಗೆ ಗೊತ್ತಿಲ್ಲದ ಅನೇಕ ವಿಚಾರಗಳ ಪರಿಚಯವಾಗುತ್ತ ಹೋಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಜಾರ ಸಮುದಾಯಕ್ಕೆ ಸಂಬಂಧಿಸಿದ ಪ್ರವಾಸಿ ತಾಣಗಳು, ಧಾರ್ಮಿಕ ಪರಂಪರೆ, ಆಧುನಿಕ ಸಮಾಜದೊಂದಿಗಿನ ಹೊಂದಾಣಿಕೆ, ರಾಜಕಾರಣದಲ್ಲಿ ಸಮುದಾಯದ ಸಾಧನೆ ಹೆಜ್ಜೆ ಎಲ್ಲ ವಿಚಾರಗಳನ್ನು ಈ ಸಂಚಿಕೆ ನಿಮ್ಮ ಕೈನಲ್ಲಿ ಇಡುತ್ತದೆ. 

ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ

ಸಂತ ಸೇವಾಲಾಲರ ವಿಶೇಷ ಸಂಚಿಕೆಯ ಪರಿಕಲ್ಪನೆ ಮತ್ತು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಸಹಾಯಕ ಸಂಪಾದಕ ವಿನೋದ್ ಕುಮಾರ್ ಬಿ ನಾಯ್ಕ್ ಸಂಚಿಕೆ ವಿವರಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ.

"