Asianet Suvarna News Asianet Suvarna News

ಪುತಿನ ಕಂಡಂತೆ ಮಹಾತ್ಮ ಗಾಂಧಿ

'ಗೋಕುಲ ನಿರ್ಗಮನ' ಖ್ಯಾತಿಯ ಪು.ತಿ.ನರಸಿಂಹಚಾರ ಕವನದ ಮೂಲಕ ಮಹಾತ್ಮ ಗಾಂಧಿಯನ್ನು ಸೃಷ್ಟಿಸಿದ್ದು ಹೀಗೆ...

Pu Ti Narasimhachar poem Neralu on Mahatma Gandhi
Author
Bengaluru, First Published Oct 2, 2018, 10:20 AM IST

ನೆರಳು

- ಪು.ತಿ. ನರಸಿಂಹಾಚಾರ್
ಮೇಲೊಂದು ಗರುಡ
ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ.

ನೆಲನೆಲದಿ ಮನೆ ಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡಗುಲ್ಮ ತೆವರು ತಿಟ್ಟು
ಎನ್ನದಿದಕೊಂದು ನಿಟ್ಟು .
ಗಾಳಿ ಬೆರಗಿದರ ನೆಲದೊಳೋಟ!
ವೇಗಕಡ್ಡಬಹುದಾವ ಹೂಟ?
ಸಿಕ್ಕು ದಣಿವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.
ಇದ ನೋಡಿ ನಾನು ನೆನೆವೆನಿಂದು-
ಇಂಥ ನೆಳಲೇನು ಗಾಂಧಿಯೆಂದು!
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.

 

ರಕ್ತ, ಮಾಂಸ, ಎಲುಬುಗಳಿಂದ ಕೂಡಿದ ಇಂಥ ಒಬ್ಬ ಜೀವಂತ ವ್ಯಕ್ತಿ ನೆಲದ ಮೇಲೆ ನಡೆದಾಡಿದ್ದ ಎಂದು ಹೇಳಿದರೆ, ಮುಂದಿನ ಪೀಳಿಗೆ ನಂಬಲಿಕ್ಕಿಲ್ಲ. 
- ಗಾಂಧೀಜಿ ಬಗ್ಗೆ ಐನ್‌ಸ್ಟೈನ್

Follow Us:
Download App:
  • android
  • ios