ಬಡ ವಿದ್ಯಾರ್ಥಿಗಳ ಏಳಿಗೆಗಾಗಿ ಈ ಕಲಾವಿದನ ಕಲಾಕೃತಿಗಳ ಮಾರಾಟ
ಬಡ ವಿದ್ಯಾರ್ಥಿಗಳ ಏಳಿಗೆಗಾಗಿ ಈ ಕಲಾವಿದನ ಕಲಾಕೃತಿಗಳ ಮಾರಾಟ
ಈ ದಿನಮಾನದಲ್ಲಿ ಎಲ್ಲರ ಓಟವು ದುಡ್ಡಿನ ಹಿಂದೆಯೇ ಆಗಿದೆ. ಗಳಿಸಿದ ಹಣವನ್ನು ಕೂಡಿಸಿ, ಪೋಣಿಸಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವತ್ತ ಯೋಚಿಸುತ್ತಿರುತ್ತಾರೆ. ಆದರೆ ಅಂತಹವರಲ್ಲಿ ಕೆಲವರು ಮಾತ್ರ ಸಮಾಜದ ಬಗ್ಗೆ, ಬಡ ವಿದ್ಯಾರ್ಥಿಗಳ ಬಗ್ಗೆ, ಪರಿಸರದ ಸಂರಕ್ಷಣೆಯ ಬಗ್ಗೆ ಆಲೋಚಿಸುತ್ತಿರುತ್ತಾರೆ. ಹಾಗೂ ಆದಾಯದ ಕೆಲವು ಭಾಗಗಳನ್ನು ಸಮಾಜಮುಖಿ ಕೆಲಸಗಳಿಗೆ ಬಳಸುತ್ತಾರೆ. ಆ ನಿಟ್ಟಿನಲ್ಲಿ ಅಚ್ಚುತ್ ಗೌಡ ಅವರು ಇಂತಹ ಲೋಕೋಪಯೋಗಿ ಕಾರ್ಯ ಮಾಡುತ್ತಿದ್ದಾರೆ. ಮಲೆನಾಡಿನ ತೀರ್ಥಹಳ್ಳಿ ತಾಲ್ಲೂಕಿನ ಆಲೂರು-ಹೊಸಕೊಪ್ಪ ಗ್ರಾಮದವರಾದ ಅಚ್ಚುತ್ ಫಿಡಿಲಿಟಸ್ ಗ್ಯಾಲರಿಯನ್ನೂ ಹಾಗೂ ಅದಕ್ಕೆ ಪೂರಕವಾಗಿ ಶಿಲ್ಪಾ ಫೌಂಡೇಶನ್ ಸ್ಥಾಪಿಸಿ, ವಿದ್ಯೆಯಿಂದ ಇಂದು ವಂಚಿತರಾಗಿರುವ ಅದೆಷ್ಟೋ ಬಡ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ದಾರಿದೀಪವಾಗಿದ್ದಾರೆ