Asianet Suvarna News Asianet Suvarna News

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಕರ್ನಾಟಕ ಮೂಲದ 6 ಮಂದಿ ಸಾವು

ಲಾರಿ, ತೂಫಾನ್ ಗೂಡ್ಸ್ ವಾಹನ ಡಿಕ್ಕಿ| ಬಳ್ಳಾರಿ ಮೂಲದ ಆರು ಜನ ಸಾವು| ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊತ್ತಪಲ್ಲಿ ಬಳಿ ನಡೆದ ಘಟನೆ| ಗಾಯಾಳುಗಳನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲು|

Truck, Goods Vechicle Accident in Andhra Pradesh
Author
Bengaluru, First Published Dec 12, 2019, 11:29 AM IST

ಆಂಧ್ರಪ್ರದೇಶ/ಬಳ್ಳಾರಿ(ಡಿ.12): ಲಾರಿ, ತೂಫಾನ್ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಮೃತಪಟ್ಟು, 10 ಮಂದಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊತ್ತಪಲ್ಲಿ ಬಳಿ‌ ಇಂದು ಬೆಳಗಿನ ಜಾವ (ಗುರುವಾರ) ನಡೆದಿದೆ. 

"

ಮೃತರನ್ನು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದ ಹಂಸಮ್ಮ, ಸುಗುಣಮ್ಮ, ಸುನೀತ, ಇಮಾಂತ ರೆಡ್ಡಿ ಎಂದು ಗುರುತಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀ ಶೈಲದಿಂದ ತಿರುಪತಿಗೆ ತೆರಳಬೇಕಾದ ಸಂದರ್ಭದಲ್ಲಿ ಲಾರಿ, ತುಫಾನ್ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

Follow Us:
Download App:
  • android
  • ios