ಮತ್ತೇ ಸಿಡಿದೆದ್ದ ಸಿದ್ದು : ಸೋಲಿಸಿದವರ ವಿರುದ್ಧ ಗುಡುಗು
ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕಹಿಯನ್ನು ಇನ್ನೂ ಮರೆತಿಲ್ಲ. ಇಂದು ವರುಣ ಕ್ಷೇತ್ರದ ಸಭೆಯಲ್ಲಿ ಭಾಗಿಯಾಗಿ ಮಾತಾಡಿದ ಅವರು, ಚಾಮುಂಡೇಶ್ವರಿ ಚುನಾವಣಾ ಫಲಿತಾಂಶದ ಬಗ್ಗೆ ಪ್ರಸ್ತಾಪಿಸಿದರು. ತಮ್ಮನ್ನು ಸೋಲಿಸಿದವರನ್ನು ಶನಿ, ರಾಹು, ಕೇತು ಎಂದು ಜಾಡಿಸಿದರು.
- ಹಿಂದುಳಿದವರ ಏಳಿಗೆ ಸಹಿಸದೆ ಶನಿ, ರಾಹು, ಕೇತು ಒಂದಾಗಿ ನನ್ನನ್ನು ಸೋಲಿಸಿದವು
- ಚಾಮುಂಡೇಶ್ವರಿಯಲ್ಲಿ ಶತ್ರುಗಳೆಲ್ಲಾ ಒಂದಾದ್ರು - ನಾಯಿ ನರಿಗಳೆಲ್ಲಾ ಒಟ್ಟಾಗಿ ನನ್ನ ಸೋಲಿಸಿದರು
- ವರುಣಾದಲ್ಲಿ ಮಾಜಿ ಸಿಎಂ ಸಿದ್ದು ಗುಟುರು