Asianet Suvarna News Asianet Suvarna News

2021ರ ಜನಗಣತಿ : ಮೊಬೈಲ್‌ ಆ್ಯಪ್‌ ಮೂಲಕ ಸಮೀಕ್ಷೆ

ಈ ಬಾರಿ ದೇಶದಲ್ಲಿ ಜನಗಣತಿ ನಡೆಯಲಿದ್ದು, ಜನಗಣತಿಗೆ ಮೊಬೈಲ್ ಆ್ಯಪ್ ಬಳಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾಹಿತಿ ನೀಡಿದ್ದಾರೆ. 

Mobile App Use For Census 2021 Chitradurga
Author
Bengaluru, First Published Jan 19, 2020, 11:11 AM IST

ಚಿತ್ರದುರ್ಗ [ಜ.19]: 2021ರ ಜನಗಣತಿಯನ್ನು ಈ ಬಾರಿ ವಿಶೇಷವಾಗಿ ಮೊಬೈಲ್‌ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಜನಗಣತಿಗಾಗಿ ಈಗಾಗಲೇ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಜನಗಣತಿಗೆ ಸಂಬಂಧಪಟ್ಟಅಧಿಕಾರಿಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ. ಗ್ರಾಮ ಮಟ್ಟದಲ್ಲಿ ತಹಸೀಲ್ದಾರ್‌ ಕಾರ್ಯನಿರ್ವಹಿಸಿದರೆ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಆಯಾ ಮುಖ್ಯಾಧಿಕಾರಿಗಳು ಇಲ್ಲವೇ ನಗರಸಭೆ ಆಯುಕ್ತರು ಕಾರ್ಯನಿರ್ವಹಿಸುವರು. ಅವರು ತಮ್ಮ ಕ್ಷೇತ್ರಗಳ ನಕ್ಷೆ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುತ್ತಾರೆ. ಅದಕ್ಕನುಗುಣವಾಗಿ ಜನಸಂಖ್ಯೆಯನ್ನಾಧರಿಸಿ ಬ್ಲಾಕ್‌ ಎಂದು ಗುರುತಿಸಲಾಗುತ್ತದೆ. ಬ್ಲಾಕ್‌ಗೆ ಒಬ್ಬ ಗಣತಿದಾರರನ್ನು ನೇಮಿಸಲಾಗುತ್ತದೆ.

ಈಗಾಗಲೇ ಜಿಲ್ಲೆಯಿಂದ ಇಬ್ಬರು ಮಾಸ್ಟರ್‌ ತರಬೇತುದಾರರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ಕೊಡಿಸಲಾಗಿದೆ. ಅವರು ಜಿಲ್ಲೆಯ 53 ಕ್ಷೇತ್ರ ತರಬೇತುದಾರರಿಗೆ ತರಬೇತಿ ನೀಡುವರು. ಕ್ಷೇತ್ರ ತರಬೇತುದಾರರು 3054 ಜನ ಗಣತಿದಾರರಿಗೆ ಹಾಗೂ 507 ಮೇಲ್ವಿಚಾರಕರಿಗೆ ತರಬೇತಿ ನೀಡುವರು. ಮಾಹಿತಿ ರವಾನಿಸುವಲ್ಲಿ ಹಾಗೂ ಮಾಹಿತಿ ಸಂಗ್ರಹಿಸುವಲ್ಲಿ ನಿಪುಣರು ಎಂಬ ಉದ್ದೇಶದಿಂದ ಶಿಕ್ಷಕರನ್ನು ಗಣತಿದಾರರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದರು.

ನಿಮ್ಮ ಕೈಲಿ ಬಡವರ ಕೆಲ್ಸ ಮಾಡಲು ಆಗುತ್ತಾ, ಇಲ್ಲ ನಾನೇ ಮಾಡ್ಲಾ : ಡಿಸಿ ಗರಂ...

ಜಿಲ್ಲೆಯಲ್ಲಿ ಒಟ್ಟು 3054 ಗಣತಿದಾರರನ್ನು ನೇಮಿಸಲಾಗುತ್ತಿದೆ. ಈ ಪೈಕಿ 278 ಹೆಚ್ಚುವರಿ ಕಾಯ್ದಿರಿಸಿದ ಗಣತಿದಾರರಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅವರು ಕಾರ್ಯನಿರ್ವಹಿಸುವರು. ಮೊಳಕಾಲ್ಮುರು ತಾಲೂಕಿನಲ್ಲಿ 258 ಗಣತಿದಾರರು, 42 ಮೇಲ್ವಿಚಾರಕರು ಕಾರ್ಯನಿರ್ವಹಿಸುವರು. ಅದರಂತೆ ಚಳ್ಳಕೆರೆ ಗಣತಿದಾರರು-673, ಮೇಲ್ವಿಚಾರಕರು-112, ಚಿತ್ರದುರ್ಗದಲ್ಲಿ ಗಣತಿದಾರರು-790, ಮೇಲ್ವಿಚಾರಕರು-131, ಹೊಳಲ್ಕೆರೆ ಯಲ್ಲಿ ಗಣತಿದಾರರು-377, ಮೇಲ್ವಿಚಾರಕರು-62, ಹಿರಿಯೂರಿನಲ್ಲಿ ಗಣತಿದಾರರು-526, ಮೇಲ್ವಿಚಾರಕರು-88 ಹಾಗೂ ಹೊಸದುರ್ಗದಲ್ಲಿ ಗಣತಿದಾರರು-430, ಮೇಲ್ವಿಚಾರಕರನ್ನಾಗಿ 72 ಜನರನ್ನು ನೇಮಿಸಲಾಗುವುದು ಎಂದು ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಗರ್ಭಿಣಿಯರಿಗೆ ಅವಾಚ್ಯ ನಿಂದನೆ : ಜಿಲ್ಲಾಧಿಕಾರಿ ಬೇಸರ...

ಜಿಲ್ಲೆಯಲ್ಲಿ 2021ರ ಜನಗಣತಿ ಕಾರ್ಯ ಸುಸೂತ್ರವಾಗಿ ಜರುಗಲು ಬೇಕಾದ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗಿದ್ದು, ನಿಖರ ಅಂಕಿ-ಅಂಶಗಳ ಸಂಗ್ರಹಣೆಯ ಕಾರ್ಯ ಯಶಸ್ವಿಗೊಳಿಸಲು ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಸರ್ಕಾರ ಜನರಿಗಾಗಿ ರೂಪಿಸುವ ಯಾವುದೇ ಯೋಜನೆಗಳಿಗೆ ಜನಸಂಖ್ಯೆಯ ವಿವರವೇ ಆಧಾರ. ಜನಗಣತಿ ಕಾರ್ಯದಲ್ಲಿ ಇದು ನಿಖರವಾಗಿ ದೊರೆಯುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳನ್ನು ಪ್ರಧಾನ ಜಿಲ್ಲಾ ಗಣತಿ ಅಧಿಕಾರಿಗಳನ್ನಾಗಿ ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಜನಗಣತಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ದೇಶದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತದೆ. ಈ ಬಾರಿ 2021 ರಲ್ಲಿ ನಡೆಯುವ ಜನಗಣತಿ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮೊದ ಸ್ತಾನದಲ್ಲಿತ್ತು

ಕಳೆದ 2011ರ ಜನಗಣತಿಯಲ್ಲಿ ಉತ್ತರ ಪ್ರದೇಶ ಸುಮಾರು 19.9ಕೋಟಿಯಷ್ಟುಜನಸಂಖ್ಯೆ ಹೊಂದುವ ಮೂಲಕ ದೇಶದಲ್ಲೇ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿ ಹೊರ ಹೊಮ್ಮಿತ್ತು. ಭಾರತ ಜಗತ್ತಿನ ಶೇ.17.5ರಷ್ಟುಜನಸಂಖ್ಯೆ ಹೊಂದಿದೆ. ಸಾಕ್ಷರತೆ 74.04, ಲಿಂಗಾನುಪಾತ 943 ರಷ್ಟಿದೆ ಎಂದು ವರದಿಯಾಗಿತ್ತು. 2011ರ ಜನಗಣತಿ ವರದಿಯಂತೆ ಕರ್ನಾಟಕದಲ್ಲಿ 6.1ಕೋಟಿ ಜನಸಂಖ್ಯೆ ದಾಖಲಾಗಿತ್ತು. ರಾಜ್ಯದ ಸಾಕ್ಷರತೆ 75.04 ಇದ್ದರೆ, ಲಿಂಗಾನುಪಾತ 965ರಷ್ಟುದಾಖಲಾಗಿತ್ತು.

Follow Us:
Download App:
  • android
  • ios