Asianet Suvarna News Asianet Suvarna News

ಲಾಕ್‌ಡೌನ್‌: ದುಷ್ಕರ್ಮಿಗಳಿಂದ ಮರಗಳ ಮಾರಣ ಹೋಮ!

28 ಎಕರೆ ಸರ್ಕಾರಿ ಜಮೀನಿನಲ್ಲಿ ಗಿಡಗಳಿಗೆ ಕೊಡಲಿ ಪೆಟ್ಟು|ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ನೀಲಗಿರಿ ಸೇರಿದಂತೆ ವಿವಿಧ ತಳಿಗಳು ಬಲಿ| ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ನಡೆದ ಘಟನೆ| ಅರಣ್ಯ ನಾಶದ ಹಿಂದೆ ಕೆಲವು ಗ್ರಾಪಂ ಸದಸ್ಯರ ಕೈವಾಡವಿದೆ ಎಂದು ಗ್ರಾಮಸ್ಥರ ದೂರು|

Miscreants cut Trees on Government Land in Kalaghatagi in Dharwad district
Author
Bengaluru, First Published Apr 9, 2020, 8:49 AM IST

ಕಲಘಟಗಿ(ಏ.09): ದೇಶದಾದ್ಯಂತ ಮಹಾಮಾರಿ ಕೊರೋನಾ ವೈರಸ್‌ ಭಯದಲ್ಲಿ ಜನರೆಲ್ಲರೂ ಮನೆಗಳಲ್ಲಿ ಲಾಕ್‌ ಆಗಿದ್ದಾರೆ. ಈ ಮಧ್ಯೆಯೇ ತಾಲೂಕಿನ ಮುಕ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೀಕಟ್ಟಿ ಗ್ರಾಮದಲ್ಲಿ ಮರಗಳ ಮಾರಣ ಹೋಮವೇ ನಡೆದಿದೆ.

ಅಲ್ಲಿನ ಸರ್ವೇ ನಂ. 137 ಸರ್ಕಾರಿ ತುರುಮಂದಿ ಹದ್ದಿನಲ್ಲಿ ಸುಮಾರು 28 ಎಕರೆ ಸರ್ಕಾರಿ ಜಮೀನಿನಲ್ಲಿ ಬೆಳೆದ ನೀಲಗಿರಿ, ಆಕಾಶ್‌ ವಿವಿಧ ತಳಿಯ ಮರಗಳನ್ನು ಸ್ಥಳೀಯ ಗ್ರಾಮಸ್ಥರೇ ಅಕ್ರಮವಾಗಿ ಕಡಿದಿರುವುದು ಇದೀಗ ಬಯಲಾಗಿದೆ.

ಅಕಾಲಿಕ ಮಳೆ: ಕೋಟ್ಯಂತರ ರುಪಾಯಿ ಬೆಳೆ ಹಾನಿ, ಸಂಕಷ್ಟದಲ್ಲಿ ರೈತ!

ಅಕ್ರಮವಾಗಿ ಕಡಿದು ತಂದ ಕಟ್ಟಿಗೆಯನ್ನು ಮನೆಗಳಲ್ಲಿ ಹಿತ್ತಲಲ್ಲಿ, ಹೊಲಗಳಲ್ಲಿ ಮುಚ್ಚಿಡಲಾಗಿದೆ. ಈ ವಿಷಯ ಮುಕ್ಕಲ್‌ ಪಿಡಿಒ ಡಿ.ಬಿ. ಜಗದೀಶ್‌ ಅವರಿಗೆ ತಿಳಿಯುತ್ತಿದ್ದಂತೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ದೊಡ್ಡಮನಿ ಅವರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯಾಧಿಕಾರಿ ಹುಣಸಿಕಟ್ಟಿ ಗ್ರಾಮದ 6 ಆರೋಪಿಗಳನ್ನು ಕಡಿದ ಗಿಡಗಳ ಸಮೇತ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಈ ಅರಣ್ಯ ನಾಶ ಪ್ರಕರಣದಲ್ಲಿ ಗ್ರಾಮದ ಹಲವಾರು ಜನರು ಭಾಗಿಯಾಗಿದ್ದು ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

28 ಎಕರೆ ಸರ್ಕಾರಿ ಜಮೀನಿನಲ್ಲಿ ಬೆಳೆಸಿದ ಗಿಡಮರಗಳು ಕಣ್ಮರೆಯಾಗಿದ್ದು, ಈ ಅರಣ್ಯ ನಾಶದ ಹಿಂದೆ ಕೆಲವು ಗ್ರಾಪಂ ಸದಸ್ಯರ ಕೈವಾಡವಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅರಣ್ಯ ನಾಶಕ್ಕೆ ಕುಮ್ಮಕ್ಕು ನೀಡಿದ ವ್ಯಕ್ತಿ ಯಾರೇ ಆಗಿರಲಿ ಅವರನ್ನು ಬಂಧಿಸಲಾಗುವುದು ಎಂದು ಅರಣ್ಯಧಿಕಾರಿ ಪಾಟೀಲ್‌ ಪತ್ರಿಕೆಗೆ ತಿಳಿಸಿದ್ದಾರೆ.
 

Follow Us:
Download App:
  • android
  • ios