Asianet Suvarna News Asianet Suvarna News

ವರುಣದೇವ ಕೃಪೆ ತೋರಬೇಕು: ದೇಶಪಾಂಡೆ!

ಜೋಡುಪಾಲಕ್ಕೆ ಸಚಿವ ದೇಶಪಾಂಡೆ ಭೇಟಿ ! ದೇಶಪಾಂಡೆಗೆ ಸಚಿವ ಯುಟಿ ಖಾದರ್ ಸಾಥ್! ಹಣದಿಂದಲೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ!  ಪ್ರಕೃತಿ ಮಾತೆ ವರುಣದೇವ ಕೃಪೆ ತೋರಬೇಕು! ಮೊದಲ ಆದ್ಯತೆ ರಕ್ಷಣಾ ಕಾರ್ಯ ನಂತರ ಪರಿಹಾರ
 

ಮಡಿಕೇರಿ(ಆ.19): ಶತಮಾನದ ಮಳೆಗೆ ತತ್ತರಿಸಿರುವ ಕೊಡಗಿನ ಮಡಿಕೇರಿಗೆ ಇಂದು ಸಚಿವ ಆರ್.ವಿ ದೇಶಪಾಂಡೆ ಭೆಟಿ ನೀಡಿದರು. ಇಲ್ಲಿನ ಜೋಡುಪಾಲಕ್ಕೆ ದೇಶಪಾಂಡೆ ಭೇಟಿ ನೀಡಿ ಪರಿಹಾರ ಕಾರ್ಯ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ದೇಶಪಾಂಡೆ, ಸರ್ಕಾರದ ಬಳಿ ಸಾಕಷ್ಟು ಹಣವಿದ್ದು, ಹಣದಿಂದಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಪ್ರಕೃತಿ ಮಾತೆ ಮತ್ತು ವರುಣದೇವ ನಮ್ಮ ಮೇಲೆ ಕೃಪಡೆ ತೋರಬೇಕಾಗಿದೆ ಎಂದು ಹೇಳಿದರು.

ಸರ್ಕಾರದ ಮೊದಲ ಆದ್ಯತೆ ರಕ್ಷಣಾ ಕಾರ್ಯವಾಗಿದ್ದು, ಆ ನಂತರವೇ ಪರಿಹಾರದ ಕುರಿತು ಚರ್ಚೆ ನಡೆಸಲಾಗುವುದು ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು. ಇನ್ನು ದೇಶಪಾಂಡೆಗೆ ಮತ್ತೋರ್ವ ಸಚಿವ ಯು.ಟಿ. ಖಾದರ್ ಸಾಥ್ ನೀಡಿದರು.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories