Asianet Suvarna News Asianet Suvarna News

'ಸಿದ್ದರಾಮಯ್ಯ ಹಿಂದು ವಿರೋ​ಧಿ​, ಭಾವ​ನೆ​ಗ​ಳೊಂದಿಗೆ ಆಟ​ವಾ​ಡು​ತ್ತಿ​ದ್ದಾರೆ'

ಗೋ ಹತ್ಯೆ ಬಿಲ್‌ ಪಾಸ್‌ ಆಗು​ತ್ತ​ದೆಂದು ಕಾಂಗ್ರೆಸ್‌ ರಾದ್ಧಾಂತ| ಕಾಂಗ್ರೆಸ್‌ ನಡೆಗೆ ಸಚಿವ ಸಿ.ಸಿ. ಪಾಟೀಲ ಆಕ್ರೋ​ಶ| ಧೈರ್ಯ​ವಿ​ದ್ದರೆ ಅವಿ​ಶ್ವಾ​ಸ ಮಂಡ​ನೆಗೆ ಅವ​ಕಾಶ ನೀಡ​ಬೇ​ಕಿ​ತ್ತು| ಮೇಲ್ಮನೆ ಉಪ ಸಭಾಪತಿ ಪೀಠಕ್ಕಾಗಿ ನಡೆ​ದಿ​ರು​ವ ಘಟನೆ ನೋವಿನ ಸಂಗ​ತಿ: ಸಿ ಸಿ ಪಾಟೀಲ| 

Minister C C Patil Slams Siddaramaiah grg
Author
Bengaluru, First Published Dec 16, 2020, 2:01 PM IST

ಗದಗ(ಡಿ.16):  ಮೇಲ್ಮನೆಯಲ್ಲಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಬಿಲ್‌ ಪಾಸ್‌ ಮಾಡು​ತ್ತದೆ ಎಂದು ಕಾಂಗ್ರೆ​ಸ್‌​ನ​ವರು ಗಲಾಟೆ ಮಾಡಿ ರಾದ್ಧಾಂತ ಮಾಡಿ​ದ್ದಾ​ರೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್‌ ಆರೋ​ಪಿ​ಸಿ​ದ್ದಾ​ರೆ.

ನಗ​ರ​ದಲ್ಲಿ ಮಂಗ​ಳ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಸಿದ್ದ​ರಾ​ಮಯ್ಯನವರು ಕಾಂಗ್ರೆಸ್‌ ಸರ್ಕಾರ ಅಧಿ​ಕಾ​ರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪ​ಡೆ​ಯು​ತ್ತೇವೆ ಎಂದು ಹೇಳಿ​ದ್ದಾರೆ. ಇದ​ರಿಂದ ಅವರು ಹಿಂದು ವಿರೋ​ಧಿ​ಯಾ​ಗಿದ್ದು, ನಮ್ಮ ಭಾವ​ನೆ​ಗ​ಳೊಂದಿಗೆ ಆಟ​ವಾ​ಡು​ತ್ತಿ​ದ್ದಾರೆ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ​ರು.

ಮೇಲ್ಮನೆ ಉಪ ಸಭಾಪತಿ ಪೀಠಕ್ಕಾಗಿ ನಡೆ​ದಿ​ರು​ವ ಘಟನೆ ನೋವಿನ ಸಂಗ​ತಿ ಎಂದಿರುವ ಸಚಿ​ವರು, ಅವಿಶ್ವಾಸ ನಿರ್ಣಯ ಮಾಡಿದ ವೇಳೆ ಕಾಂಗ್ರೆಸ್‌ನವರು ಖುರ್ಚಿ ಮೇಲೆ ಕೂಡಬಾರದು. ಆದ​ರೆ, ಕುಳಿ​ತು​ಕೊಂಡು ಗಲಾಟೆ ಮಾಡುವ ಮೂಲಕ ತಮ್ಮ ಸಂಸ್ಕೃತಿ ತೋರಿ​ಸಿ​ದ್ದಾರೆ. ಈ ರೀತಿ ಗಲಾಟೆ ಮಾಡು​ವುದು ಸಿದ್ದ​ರಾ​ಮ​ಯ್ಯ​ನ​ವರ ಕಾಲ​ದಿಂದ ಬಂದ ಪರಂಪ​ರೆ​ಯಾ​ಗಿದ್ದು, ಈ ಹಿಂದೆ ಶಂಕರ ಬಿದರಿ ಅವ​ರನ್ನು ಸದ​ನ​ದಿಂದ ಹೊರ​ಹಾಕಿ ಹೈಡ್ರಾಮ ಮಾಡಿ​ದ್ದರು ಎಂದು ಕಿಡಿ​ಕಾ​ರಿದರು. ಧೈರ್ಯ​ವಿ​ದ್ದರೆ ಅವಿ​ಶ್ವಾಸ ಮಂಡ​ನೆಗೆ ಅವ​ಕಾಶ ನೀಡಿ ಮತ ಹಾಕ​ಬೇ​ಕಿತ್ತು ಎಂದು ಸವಾಲು ಹಾಕಿ​ದ​ರು.

ಬೀದಿಗಿಳಿದ ನಲಪಾಡ್ ಹ್ಯಾರಿಸ್ : ಪ್ರತಿಭಟನೆಯಲ್ಲಿ ಹ್ಯಾರಿಸ್ ಪುತ್ರ

ಬಹು​ಮ​ತ​ವಿ​ಲ್ಲದೆ ಸ್ಪೀಕರ್‌ ಸ್ಥಾನ ನೀಡ​ಬೇ​ಕಿತ್ತೆ ಎಂದು ಪ್ರಶ್ನಿ​ಸಿದ ಅವರು, ನಮಗೆ ಬಹು​ಮ​ತ ಸಿಕ್ಕಿ​ದ್ದರೆ 10 ನಿಮಿ​ಷ​ದಲ್ಲಿ ಬಿಲ್‌ ಪಾಸ್‌ ಮಾಡ​ಲಾ​ಗಿತ್ತು ಎಂದು ಹೇಳಿ​ದ​ರು. ಡಿ. 17ರಂದು ನಗ​ರ​ದಲ್ಲಿ ಜಿಲ್ಲಾ ಬಿಜೆಪಿ ನೂತನ ಕಟ್ಟದ ಭೂಮಿ​ಪೂಜಾ ಕಾರ್ಯ​ಕ್ರಮ ಜರು​ಗ​ಲಿದ್ದು, ಬಿಜೆಪಿ ರಾಜ್ಯಾ​ಧ್ಯಕ್ಷ ನಳೀ​ನ​ಕು​ಮಾರ ಕಟೀಲ್‌ ನೆರ​ವೇ​ರಿ​ಸಲಾ​ಗು​ವುದು ಎಂದು ತಿಳಿ​ಸಿದ ಸಚಿ​ವರು, ಈ ಹಿಂದೆ ಜಿಲ್ಲಾ ಬಿಜೆಪಿ ಅಧ್ಯ​ಕ್ಷ​ರಿದ್ದ ವೇಳೆ​ ಜಿಲ್ಲಾ​ಧಿ​ಕಾರಿ ಕಚೇರಿ ಎದು​ರಿನ ಹೆದ್ದಾರಿ ಪಕ್ಕ​ದ​ಲ್ಲಿ​ಯೇ 12 ಸಾವಿರ ಸ್ಪೇರ್‌ ಫೀಟ್‌ ಜಾಗೆ ಖರೀ​ದಿ​ಸ​ಲಾ​ಗಿತ್ತು. ಈಗ ಜಿಲ್ಲಾ ಉಸ್ತು​ವಾರಿ ಸಚಿ​ವ​ನಾ​ಗಿದ್ದ ವೇಳೆ​ಯಲ್ಲಿ ಜಿಲ್ಲಾ ಬಿಜೆಪಿ ಭವನ ನಿರ್ಮಾ​ಣಕ್ಕೆ ಚಾಲನೆ ದೊರೆ​ಯು​ತ್ತಿ​ರು​ವುದು ಸಂತ​ಸದ ಸಂಗ​ತಿ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳ​ಶೆಟ್ಟಿ ಮಾತ​ನಾಡಿ, ರಾಜ್ಯದ 14 ಜಿಲ್ಲೆ​ಗ​ಳಲ್ಲಿ ಜಿಲ್ಲಾ ಬಿಜೆಪಿ ಭವ​ನ​ ನಿರ್ಮಿ​ಸು​ತ್ತಿದ್ದು ಅಂದಾಜು ವೆಚ್ಚ, ನೀಲ ನಕ್ಷೆ ಎಲ್ಲ​ವನ್ನು ಪಕ್ಷದ ವರಿ​ಷ್ಠರೆ ನಿರ್ಧ​ರಿ​ಸ​ಲಿ​ದ್ದಾರೆ ಎಂದರು. ಸುದ್ದಿ​ಗೋ​ಷ್ಠಿ​ಯಲ್ಲಿ ರಾಜ್ಯ ಕಾರ್ಯ​ಕಾ​ರಣಿ ಮಂಡಳಿ ಸದಸ್ಯ ರಾಜು ಕುರು​ಡಗಿ, ಎಂ.ಎ​ಸ್‌. ​ಕ​ರಿ​ಗೌಡ್ರ, ಶ್ರೀಪತಿ ಉಡುಪಿ ಮುಂತಾ​ದ​ವರು ಹಾಜ​ರಿ​ದ್ದರು.
 

Follow Us:
Download App:
  • android
  • ios