Asianet Suvarna News Asianet Suvarna News

ಶ್ರೀರಂಗಪಟ್ಟಣ: ತಾಯಿ ಅಸ್ಥಿ ವಿಸರ್ಜನೆಗೆ ಬಂದವ ನದಿಯಲ್ಲಿ ಕೊಚ್ಚಿಹೋದ

ಇದಕ್ಕಿಂತ ಇನ್ನೊಂದು ದುರಂತ ಇನ್ನೊಂದಿಲ್ಲ. ತನ್ನ ತಾಯಿಯ ಅಸ್ಥಿ ವಿಸರ್ಜನೆ ಮಾಡಲು ನದಿಗೆ ಇಳಿದಿದ್ದ ಮಗನೇ ಕೊಚ್ಚಿಹೋಗಿದ್ದಾನೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಬಳಿಯ ಕಾವೇರಿ ನದಿ ಸಂಗಂನಲ್ಲಿ ದುರ್ಘಟನೆ ನಡೆದುಹೋಗಿದೆ.

Man washed away in Cauvery River of Karnataka Mysuru
Author
Bengaluru, First Published Aug 1, 2019, 5:16 PM IST

ಮಂಡ್ಯ[ಆ. 01]  ತಾಯಿಯ ಅಸ್ಥಿ ವಿಸರ್ಜನೆ ವೇಳೆ ನದಿಯಲ್ಲಿ ಮಗ ಕೊಚ್ಚಿ ಹೋಗಿದ್ದಾನೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಬಳಿಯ ಕಾವೇರಿ ನದಿ ಸಂಗಮದಲ್ಲಿ ದುರ್ಘಟನೆ ನಡೆದಿದೆ.

ಶ್ರೀಕಾಂತ್ (45 ) ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಶ್ರೀಕಾಂತ್ ಬೆಂಗಳೂರಿನ ರಾಜಾಜಿ ನಗರ ನಿವಾಸಿ. ತಾಯಿ ಅಂಬುಜಾ ಅವರ ಅಸ್ತಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಬಂದಿದ್ದರು.

ಈಕ್ವಲ್ ಜಸ್ಟೀಸ್... ಸಂಸತ್‌ನಲ್ಲಿ ಕಾವೇರಿ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸುಮಲತಾ

ಮೃತ ದೇಹಕ್ಕಾಗಿ ಶೋಧ ಅಗ್ನಿಶಾಮಕ ಸಿಬ್ಬಂದಿ,ಪೋಲಿಸರಿಂದ ಶೋಧ ಕಾರ್ಯ ಮುಂದುವರಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Follow Us:
Download App:
  • android
  • ios