Asianet Suvarna News Asianet Suvarna News

ದೇಹದ ಅಂಗಾಗಳನ್ನು ಕತ್ತರಿಸಿ ತುಂಡು ತುಂಡಾಗಿಸಿ ಯುವತಿಯ ಬರ್ಬರ ಹತ್ಯೆ

ಯುವತಿಯೋರ್ವಳ ದೇಹದ ಅಂಗಾಂಗಗಳನ್ನು ಕತ್ತರಿಸಿ ತುಂಡು ತುಂಡಾಗಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ. ಅಪರಿಚಿತ ಶವದ ಪತ್ತೆಗೆ ಮನವಿ ಮಾಡಲಾಗಿದೆ

Lady Brutally Killed in KR Pete snr
Author
Bengaluru, First Published Nov 19, 2020, 11:42 AM IST

ಕೆ.ಆ​ರ್‌.​ಪೇ​ಟೆ (ನ.19): ತಾಲೂಕಿನ ಹೇಮಗಿರಿಯ ಬಳಿ ತ್ರಿಶೂಲ್‌ ಜಲವಿದ್ಯುದಾಗಾರದ ಮುಖ್ಯ ಗೇಟಿನ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಕೈಕಾಲುಗಳು ಹಾಗೂ ರುಂಡ-ಮುಂಡವನ್ನು ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಇಲ್ಲಿಗೆ ತಂದು ಬಿಸಾಡಿಹೋಗಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ.

25ರಿಂದ 30 ವರ್ಷದೊಳಗಿರುವ ಯುವತಿಯನ್ನು ಬರ್ಬರವಾಗಿ ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು ಗೋಣಿಚೀಲದಲ್ಲಿ ಕಾರಿನಲ್ಲಿಟ್ಟುಕೊಂಡು ಬಂದು ಇಲ್ಲಿ ಬಿಸಾಡಿಹೋಗಿರಬಹುದೆಂದು ಶಂಕಿಸಿರುವ ಪೋಲಿಸರು. ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿಹೋಗಿರುವ ಕೈಕಾಲುಗಳು, ರುಂಡ-ಮುಂಡ, ತಲೆ ಹಾಗೂ ದೇಹದ ಭಾಗವನ್ನು ಪತ್ತೆಮಾಡಿದ್ದು ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಕೆ.ಆ​ರ್‌.​ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. 

ಅವನ ಸಂಗಕ್ಕಾಗಿ ಗಂಡನನ್ನೇ ಕೊಂದಳು : ದೇಹದ ಖಾಸಗಿ ಅಂಗಗಳ ಹಿಸುಕಿ ಹಿಂಸೆ ಕೊಟ್ಟರು .

ಮೃತ ಮಹಿಳೆಯ ಮೂಗಿನಲ್ಲಿ ಕೆಂಪು ಹರಳಿನ ಮೂಗುತಿ, ಬಲಗೈನ ಮುಂಗೈನ ಮೇಲೆ ಮೀನಿನ ಹಚ್ಚೆಯ ಗುರುತು ಇರುತ್ತದೆ. ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೆ.ಆರ್‌.ಪೇಟೆ ಗ್ರಾಮಾಂತರ ಪೋಲಿಸರನ್ನು ಸಂಪರ್ಕಿಸಬೇಕು ಎಂದು ಪೋಲಿಸ್‌ ಪ್ರಕಟಣೆಯು ತಿಳಿಸಿದೆ.

ಹೊಸಕೋಟೆ ಕ್ಷೇತ್ರದ ಶಾಸಕರಾದ ಶರತ್‌ ಬಚ್ಚೇಗೌಡರ ಒಡೆತನದ ತಾಲೂಕಿನ ಹೇಮಗಿರಿಯ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತ್ರಿಶೂಲ್‌ ಜಲವಿದ್ಯುದಾಗಾರದಲ್ಲಿ ಕತ್ತರಿಸಿ ತುಂಡು ತುಂಡಾಗಿರುವ ಮಹಿಳೆಯ ಮೃತ ದೇಹವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಎನ್‌.ಸುಧಾಕರ್‌, ನಾಗಮಂಗಲ ಡಿವೈಎಸ್‌ಪಿ ನವೀನ್‌ಕುಮಾರ್‌, ಗ್ರಾಮಾಂತರ ಪೋಲಿಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಸುರೇಶ್‌ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow Us:
Download App:
  • android
  • ios