Asianet Suvarna News Asianet Suvarna News

ಹಾಡಿನ ಮೂಲಕ ರೈತರಿಗೆ ಪರಿಹಾರ ಬೇಡಿದ ಕೊಪ್ಪಳ ನೌಕರ

ಕೊಪ್ಪಳ ಜಿಲ್ಲೆಯಲ್ಲಿನ ಬರಗಾಲವನ್ನು ಹಾಡಿನ ಮೂಲಕ ವಿನೂತನವಾಗಿ ಶಿಕ್ಷಣ ಇಲಾಖೆಯ ನೌಕರರೊಬ್ಬರು ಹನುಮಂತಪ್ಪ ಕುರಿ ಹಾಡಿನ ಮೂಲಕ ಜಿಲ್ಲೆಯಲ್ಲಿನ ಬರಗಾಲದ ಕುರಿತು ವಿವರಿಸಿದ್ದಾರೆ.

ಹನುನಂತಪ್ಪ ಕುರಿ ಬರಗಾರಲದ ಬಗ್ಗೆ ಸ್ವತಃ ಹಾಡು ರಚಿಸಿ, ಸ್ವತಃ ತಾನೇ ಹಾಡಿದ್ದಾನೆ. ಹನುಮಂತಪ್ಪ ಕುರಿ ತಮ್ಮ ಹಾಡಿನಲ್ಲಿ ಸರಕಾರ ರೈತರಿಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದು,ರೈತರು ಎದೆಗುಂದದೆ ಆತ್ಮಹತ್ಯೆಗೆ ಶರಣಾಗದಂತೆ ಮನವಿ ಮಾಡಿದ್ದಾರೆ. ಇನ್ನು ಹನುಮಂತ ಕುರಿ ಈ‌ ಹಿಂದೆ ಇದೇ ರೀತಿ ವಿವಿಧ ಸಮಾಜಮುಖಿ ಗೀತೆಗಳ ರಚನೆ ಮಾಡಿದ್ದರು. ಇದೀಗ ಬರಗಾಲದ ಕುರಿತು ಹಾಡು ರಚಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಫುಲ್ ಫೇಮಸ್ ಆಗಿದ್ದು, ಹನುಮಂತಪ್ಪ ಕುರಿಯ ಬರಗಾಲದ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.