ಅಯ್ಯಯ್ಯಪ್ಪಾ... ಪೊಲೀಸ್ರು ಇದೇನ್ ಮಾಡ್ತಾವ್ರೆ!
ಒಂದೇ ಗಂಟೆಯಲ್ಲಿ ನಾಟಕ ಕಲಿತ ಡಿವೈಎಸ್ಪಿಗಳು! ಖಾಕಿ ಬಿಟ್ರು ಕಲಾವಿದರಾದ್ರು ಪೊಲೀಸರು; ಡಿವೈಎಸ್ಪಿಗಳ ನಾಟಕಕ್ಕೆ ಮಾಜಿ ಡಿಜಿ & ಐಜಿಪಿ ರೂಪಕ್ ಕುಮಾರ್ ದತ್ತ ಫಿದಾ,; ಮಾನವ ಹಕ್ಕುಗಳಿಗಾಗಿ ಖಾಕಿ ಬಿಟ್ಟು ಕಲಾವಿದರಾದ ಪೊಲೀಸರು!
ಸಮಾಜದಲ್ಲಿ ಶಾಂತಿ ಕಾಪಾಡೋದಕ್ಕೂ ಸೈ, ಅರಿವು ಮೂಡಿಸೋಕು ಸೈ ಎಂದ್ರು ಪೊಲೀಸ್ ಅಧಿಕಾರಿಗಳು. ಹೌದು, ಮಾನವ ಹಕ್ಕುಗಳ ದಿನಾಚರಣೆಗಾಗಿಯೇ ಡಿವೈಎಸ್ಪಿಗಳು ನಾಟಕ ಪ್ರದರ್ಶನ ನೀಡಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಪ್ರೊಬೇಷನರಿ ಡಿವೈಎಸ್ಪಿಗಳು, ಕೇವಲ ಒಂದೇ ಗಂಟೆಯಲ್ಲಿ ನಾಟಕ ಕಲಿತು, ಮಾನವ ಹಕ್ಕುಗಳ ಸಂದೇಶ ಸಾರಿದ್ದಾರೆ. ಮಾನವನ ಹಕ್ಕುಗಳ ಬಗ್ಗೆ ಜಾಗೃತಿ, ಪ್ರಾಣಿಗಳ ಹಕ್ಕುಗಳ ಸಂದೇಶ ಸಾರೋ ಮೂರು ಕಿರು ನಾಟಕಗಳ ಪ್ರದರ್ಶನ ನೀಡಿದ ಪ್ರೊಬೇಷನರಿ ಡಿವೈಎಸ್ಪಿಗಳ ನಾಟಕಕ್ಕೆ ಮಾಜಿ ಡಿಜಿ & ಐಜಿಪಿ ರೂಪಕ್ ಕುಮಾರ್ ದತ್ತ ಫಿದಾ ಆಗಿದ್ದಾರೆ.
ಆಡಳಿತ ತರಬೇತಿ ಸಂಸ್ಥೆಯ 154,155 ನೇ ಬ್ಯಾಚ್ ನ ಪ್ರೊಬೇಷನರಿ ಡಿವೈಎಸ್ಪಿ ಅಧಿಕಾರಿಗಳಿಗೆ ರೂಪಕ್ ಕುಮಾರ್ ದತ್ತರಿಂದ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಮಾನವ ಹಕ್ಕುಗಳು ವ್ಯಕ್ತಿ ಹುಟ್ಟಿನಿಂದಲೇ ಸ್ವಾಭಾವಿಕವಾಗಿ ಬರುತ್ತವೆ. ಮಾನವ ಹಕ್ಕುಗಳ ಜೊತೆ ಜೊತೆಯಲ್ಲೇ ಪ್ರಾಣಿಗಳ ಹಕ್ಕುಗಳ ಬಗ್ಗೆಯೂ ಮಾತನಾಡಬೇಕಿದೆ. ಆಧುನಿಕ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಅತ್ಯಗತ್ಯ, ಎಂದು ರೂಪಕ್ ಕುಮಾರ್ ದತ್ತ ಈ ಸಂದರ್ಭದಲ್ಲಿ ಹೇಳಿದ್ದಾರೆ.