Asianet Suvarna News Asianet Suvarna News

ಗ್ರಾಮೀಣ ವಸತಿ ಯೋಜನೆಗಳಿಗೆ ಗ್ರಹಣ!

ಜಿಲ್ಲೆಯ ಅಧಿಕಾರ ಶಾಹಿ ದಿವ್ಯ ನಿರ್ಲಕ್ಷ್ಯ ಹಾಗೂ ಜನಪ್ರತಿನಿದಿಗಳಲ್ಲಿನ ಇಚ್ಛಾಶಕ್ತಿ ಕೊರತೆಯ ಪರಿಣಾಮ ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಗ್ರಾಮೀಣ ವಸತಿ ಯೋಜನೆಗಳಿಗೆ ಗ್ರಹಣ ಬಡಿಯುತ್ತಲೇ ಇದೆ. ರಾತ್ರೋರಾತ್ರಿ ಸಂಘ ಸಂಸ್ಥೆಗಳಿಗೆ, ಟ್ರಸ್ಟ್‌ಗಳಿಗೆ ಭೂಮಿ ಹಂಚುವ ಜಿಲ್ಲಾಡಳಿತ ಬಡಪಾಯಿಗಳ ಮನೆ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದೆ.

Fraud in  rural housing projects Chikkaballapura snr
Author
First Published Oct 10, 2022, 6:01 AM IST

 ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಅ.10): ಜಿಲ್ಲೆಯ ಅಧಿಕಾರ ಶಾಹಿ ದಿವ್ಯ ನಿರ್ಲಕ್ಷ್ಯ ಹಾಗೂ ಜನಪ್ರತಿನಿದಿಗಳಲ್ಲಿನ ಇಚ್ಛಾಶಕ್ತಿ ಕೊರತೆಯ ಪರಿಣಾಮ ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಗ್ರಾಮೀಣ ವಸತಿ ಯೋಜನೆಗಳಿಗೆ ಗ್ರಹಣ ಬಡಿಯುತ್ತಲೇ ಇದೆ. ರಾತ್ರೋರಾತ್ರಿ ಸಂಘ ಸಂಸ್ಥೆಗಳಿಗೆ, ಟ್ರಸ್ಟ್‌ಗಳಿಗೆ ಭೂಮಿ ಹಂಚುವ ಜಿಲ್ಲಾಡಳಿತ ಬಡಪಾಯಿಗಳ ಮನೆ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದೆ.

ಹೌದು, ಚಿಕ್ಕಬಳ್ಳಾಪುರ (Chikkaballapura)  ಜಿಲ್ಲೆಯಾಗಿ ದಶಕಗಳೇ ಉರುಳಿದರೂ ಇನ್ನೂ ಶಾಶ್ವತವಾದ ಸೂರು ಕಾಣದ ಜಿಲ್ಲೆಯ ರೈತಾಪಿ ಕೂಲಿ ಕಾರ್ಮಿಕರಿಗೆ (Labours) ಸಂಖ್ಯೆ ಹೆಚ್ಚುತ್ತಲೇ ಇದ್ದು ಜಿಲ್ಲೆಯಲ್ಲಿ ಇನ್ನೂ 39,294 ಮಂದಿಗೆ ವಸತಿ ಹಾಗೂ 22,639 ಮಂದಿ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ನಿವೇಶನ ಇಲ್ಲದಂತಾಗಿ ಬಡವರಿಗೆ ನಿವೇಶನ ಬರೀ ಅರಣ್ಯರೋಧನವಾಗಿದೆ.

ಯೋಜನೆ ಆಟಕ್ಕುಂಟು ಲೆಕ್ಕಕ್ಕಿಲ್ಲ

ಜಿಲ್ಲಾಡಳಿತ ಭವನದಲ್ಲಿ ನಡೆಯುವ ಸಭೆ ಕೆಡಿಪಿ ಸಭೆಯಲ್ಲೂ ಕೂಡ ಜಿಲ್ಲೆಯ ವಸತಿ, ನಿವೇಶನ ರಹಿತರ ಬಗ್ಗೆ ಗಂಟೆಗಟ್ಟಲೇ ಚರ್ಚೆ ನಡೆಯುತ್ತಿದ್ದರೂ ಇಲ್ಲಿಯವರೆಗೂ ಬಡವರಿಗೆ ನಿವೇಶನ ಹಂಚಿಕೆಗೆ ಬೇಕಾದ ಬದ್ದತೆಯನ್ನು್ನ ಜಿಲ್ಲಾಡಳಿತ ತೋರದಿರುವುದು ಅಧಿಕಾರಿಗಳಿಗೆ ಬಡವರ ಮೇಲಿನ ಇಚ್ಛಾಶಕ್ತಿಯನ್ನು ಎದ್ದು ಕಾಣುವಂತೆ ಮಾಡಿದೆ. ಕೆಡಿಪಿ ಸಭೆಗಳಲ್ಲಿ ಪಾಲ್ಗೊಳ್ಳುವ ಉಸ್ತುವಾರಿ ಸಚಿವರಿಂದ ಹಿಡಿದು ಸಂಸದರು, ಶಾಸಕರು ಅಧಿಕಾರಿಗಳಿಗೆ ಬಡವರಿಗೆ ವಸತಿ, ನಿವೇಶನ ಹಂಚಿಕೆಗೆ ಕ್ರಮ ವಹಿಸಿ ಎಂಬ ತಾಕೀತು ಅಧಿಕಾರಿಗಳ ಕಿವಿಗೆ ಬೀಳದಂತೆ ಆಗಿದ್ದು ಗ್ರಾಮೀಣ ವಸತಿ ಯೋಜನೆಗಳು ಬಡವರ ಪಾಲಿಗೆ ಆಟಕ್ಕಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ವಿಪರ್ಯಾಸ ಅಂದರೆ ಜಿಲ್ಲೆಯ ಚುನಾಯಿತ ಜನಪ್ರತಿನಿದಿಗಳಿಗೂ ಕೂಡ ಬಡವರಿಗೆ ವಸತಿ ಹಾಗೂ ನಿವೇಶನ ಹಂಚಿಕೆ ಪ್ರಕ್ರಿಯೆ ಒಂದು ರೀತಿ ಚುನಾವಣಾ ಅಸ್ತ್ರವಾಗಿ ಪರಿಣಮಿಸಿದ್ದು ಅಂಗೈಯಲ್ಲಿ ಆಕಾಶ ತೋರಿಸುವ ರೀತಿಯಲ್ಲಿ ಜಿಲ್ಲೆಯ ವಸತಿ ಹಾಗೂ ನಿವೇಶನ ಸಮಸ್ಯೆಯನ್ನು ಶಾಶ್ವತವಾಗಿ ಜೀವಂತವಾಗಿ ಇಡುವಂತಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ನಿವೇಶನ ಹಂಚಿಕೆಗೆ ಬೇಕಾದ ಜಮೀನು ಗುರುತಿಸುವಲ್ಲಿ ಜಿಲ್ಲಾಡಳಿತ ಕಾಲಹರಣ ಮಾಡುತ್ತಿದೆಯೆಂಬ ಆರೋಪ ಜಿಲ್ಲೆಯಲ್ಲಿ ಶಾಶ್ವತವಾದ ಸ್ವಂತ ಸೂರಿನ ಕನಸು ಕಾಣುತ್ತಿರುವ ಬಡವರ ಆಕ್ರೋಶವಾಗಿದೆ.

ವೇಶನ ಸಿಗ್ತಿಲ್ಲ

ಜಿಲ್ಲೆಯಲ್ಲಿ ಗ್ರಾಮೀಣ ವಸತಿ ಯೋಜನೆಗಳ ಅನುಷ್ಟಾನಕ್ಕೆ ಅಡ್ಡಿ ಆಗಿರುವುದು ನಿವೇಶನ ಸಮಸ್ಯೆ, ಸರ್ಕಾರ ಪ್ರತಿ ವರ್ಷ ಬಸವ ಇಂದಿರಾ, ಅಂಬೇಡ್‌್ಕ ನಿವಾಸ್‌ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಮಂಜೂರಾಗಿ ಸಿಗುತ್ತಿದ್ದರೂ ನಿವೇಶನ ಸಮಸ್ಯೆ ಬೃಹದಕಾರವಾಗಿ ಬೆಳೆದು ನಿಂತಿದೆ.

ಅಕ್ರಮ ಮದ್ಯದ ಹೊಳೆ

 ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಳೆಗಾಲದಲ್ಲಿ ಅಂತೂ ಜಿಲ್ಲೆಯಲ್ಲಿ ಅಕ್ರಮ ಮದ್ಯದ ಹೊಳೆ ಹರಿದಿದ್ದು ಕೇವಲ 2 ತಿಂಗಳಲ್ಲಿ ನೂರಾರು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿರುವುದು ಎದ್ದು ಕಾಣುತ್ತಿದೆ. ಕಳೆದ ಜುಲೈ- ಆಗಸ್ಟ್‌ ತಿಂಗಳಲ್ಲಿ 10 ಕ್ಕೂ ಹೆಚ್ಚು ಅಕ್ರಮ ಮದ್ಯ ಸಾಗಾಟ ಪ್ರಕರಣಗಳು ದಾಖಲಾದರೆ ಚಿಲ್ಲರೆ, ಡಾಬಾ, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 120ಕ್ಕೂ ಹೆಚ್ಚು ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲು ಮಾಡಿ ಅಪಾರ ಪ್ರಮಾಣದ ಮದ್ಯ ವಶಕ್ಕೆ ಪಡೆದಿದ್ದಾರೆ.

ಮಳೆಗಾಲದಲ್ಲಿ ಜಿಲ್ಲಾದ್ಯಂತ ಮದ್ಯಕ್ಕೆ ಭಾರೀ ಬೇಡಿಕೆ ಕಂಡು ಬಂದಿದ್ದು ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಹೆಚ್ಚಾಗಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ಕೇವಲ 2 ತಿಂಗಳಲ್ಲಿ 132 ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾರ ಪ್ರಕರಣಗಳನ್ನು ದಾಖಲಿಸಿ ಒಟ್ಟು 108.810 ಲೀಟರ್‌ಮದ್ಯ, 34.33 ಲೀಟರ್‌ ಬಿಯರ್‌, ಹಾಗೂ 2.014 ಕೆಜಿ ಗಾಂಜಾವನ್ನು ಅಬಕಾರಿ ಪೊಲೀಸರು ಕಾರ್ಯಾಚರಣೆ ವೇಳೆ ವಶಕ್ಕೆ ಪಡೆದಿದ್ದಾರೆ. ಅಕ್ರಮ ಮದ್ಯ ಹಾಗೂ ಸಾಗಾಟಕ್ಕೆ ಬಳಕೆಯಾದ 9 ವಾಹನಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು ಬರೋಬ್ಬರಿ ಒಟ್ಟು 123 ಆರೋಪಿಗಳನ್ನು ದಸ್ತಗಿರಿ ಮಾಡಿರುವುದು ಕಂಡು ಬಂದಿದೆ.

ವ್ಯವಸ್ಥಾಪಕನ ಹಣದ ಅವ್ಯವಹಾರ ಬೆನ್ನಲೇ ಕ್ಯಾಷಿಯರ್‌ ಆತ್ಮಹತ್ಯೆಗೆ ಶರಣು

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲೆಂದು ಅಬಕಾರಿ ಇಲಾಖೆ, ಗ್ರಾಪಂ ಸದಸ್ಯರಿಗೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಕಲಂ, 50 ರಂತೆ ತಿಳುವಳಿಕೆ ಪತ್ರಗಳನ್ನು ನೀಡಿ ಅಬಕಾರಿ ಅಕ್ರಮಗಳ ಬಗ್ಗೆ ನೀಡುವಂತೆ ಸೂಚಿಸಿದೆ. ಜಿಲ್ಲಾದ್ಯಂತ ಆಗಾಗ ದಾಳಿಗಳನ್ನು ನಡೆಸಿ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ವಹಿಸುವ ನಿಟ್ಟಿನಲ್ಲಿ 45 ಮಾರ್ಗಗಳನ್ನಾಗಿ ವಿಗಂಡಿಸಿಕೊಂಡಿದ್ದು ಒಟ್ಟು 347 ಪಾಯಿಂಟ್‌ ಬುಕ್‌ಗಳನ್ನು ಇಡಲಾಗಿದೆ. ಅಧಿಕಾರಿಗಳು ಗಸ್ತು ವೇಳೆ ಹಳೇ ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರೂ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಗಣನಿಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

Follow Us:
Download App:
  • android
  • ios